ಹುಬ್ಬಳ್ಳಿ-ಧಾರವಾಡ

ಈರುಳ್ಳಿ –ಮೆಣಸಿನಕಾಯಿ ಗಿಡದ ಮಧ್ಯೆ ಗಾಂಜಾ ಸೊಪ್ಪು ಪತ್ತೆ-ಪೋಲಿಸರಿಂದ ಆರೋಪಿ ಬಂಧನ…!

Published

on

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದಲ್ಲಿ ಗಾಂಜಾಸೊಪ್ಪು ಪತ್ತೆಯಾಗಿದೆ, ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಂದ ಚಂದ್ರು ಕಾಶೀನಾಥ ಬನ್ನಿಕೊಪ್ಪ ಎಂಬಾತ ಜಮೀನು ಬಾಡಿಗೆ ಪಡೆದು ಈರುಳ್ಳಿ, ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದು, ಗಿಡಗಳ ಮಧ್ಯದಲ್ಲಿ ಅಲ್ಲಲ್ಲಿ ಗಾಂಜಾ ಸೊಪ್ಪುನ್ನು ಯಾರಿಗೂ ತಿಳಿಯದಂತೆ ಬೆಳೆದಿದ್ದಾ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಪೋಲಿಸರು ಖಚಿತ ಮಾಹಿತಿ ಆಧಾರದ ಮೇರೆಗೆ ಡಿವೈಎಸ್ ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ತಂಡ ದಾಳಿ ನಡೆಸಿ ಸುಮಾರು18.4 ಕೆ.ಜಿ. ಹಸಿ ಗಾಂಜಾ ಗಿಡಗಗಳು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version