ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪೋಲೀಸ್ ಠಾಣೆಯಲ್ಲಿ ನಾಗರಘಟ್ಟ ಗ್ರಾಮದಲ್ಲಿ ಬಾವಿಯಲ್ಲಿ ಶವದೊರಕಿದ್ದು, ಮೃತಳ ತಂಗಿ ಅಕ್ಕನ ಸಾವಿನಲ್ಲಿ ನನಗೆ ಅನುಮಾನವಿದೆ ಎಂದು ಪೋಲಿಸರಿಗೆ ತಿಳಿಸಿದ್ದರಿಂದ ಯು.ಡಿ.ಆರ್.ನಂ 04/2020 ಕಲಂ 174(ಸಿ) ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಾಗಿತ್ತು. ಮತ್ತು ಹೆಚ್ಚಿನ ಪರೀಕ್ಷೆಗಾಗಿ ಹಿಷ್ಟೋಪೆಥಾಲಜಿ ವಿಭಾಗಕ್ಕೆ ಕಳುಹಿಸಿದಾಗ ಮಹಿಳೆಯ ಕುತ್ತಿಗೆಯನ್ನು ಬಿಗಿದು ಸಾಯಿಸಲಾಗಿದೆ ಎಂಬ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೃತಳ ಗಂಡ ರಘುನಂದನ್ ನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಿಸಿದಾಗ ನಾನು ಮತ್ತು ನನ್ನ ತಾಯಿ ಪತ್ನಿಗೆ ವೇಲ್ಸುತ್ತಿ ಸಾಯಿಸಿದ್ದು, ನಂತರ ಅದನ್ನು ಯಾರಿಗೂ ತಿಳಿಯದಂತೆ ಸುಟ್ಟುಹಾಕಿದ್ದೇವು, ನಂತರ ನಾನು ಹಾಗೂ ತನ್ನ ತಂದೆ ಮಂಜುನಾಥ ಮತ್ತು ಅಣ್ಣಮಹಾಲಿಂಗಯ್ಯ ಜೊತೆಯಾಗಿ ಶವವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ ಬಾವಿಗೆ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಗ್ರಾಮಾಂತರ ಸಿ.ಐ ವಿಜಯಲಕ್ಷ್ಮಿ, ನೊಣವಿನಕೆರೆ ಸಿ.ಪಿ.ಐ ಮುದ್ದಯ್ಯ, ಸಿಬ್ಬಂದಿಗಳಾದ ಬೋರಲಿಂಗಯ್ಯ, ರುದ್ರೇಶ್, ಮಧುಸೂಧನ್, ಲೋಕೇಶ್, ಅಜಿತ್ ಮುಂತಾದವರನ್ನು ಎಸ್.ಪಿ ಕೃಷ್ಣವಂಶಿ ಅಭಿನಂದಿಸಿದ್ದಾರೆ.
ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.