ಮಂಡ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿರವರ ಹುಟ್ಟುಹಬ್ಬದ ಅಂಗವಾಗಿ ಹಾಲು ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ…!

Published

on

ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಹಾಗೂ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿರವರ ಹುಟ್ಟುಹಬ್ಬದ ಅಂಗವಾಗಿ ಹಾಲು ಮಾರಾಟಗಾರರು ಹಾಗೂ ಕೊಳ್ಳುವವರಿಗೆ ಮಾಸ್ಕ್ ವಿತರಣಾ ಹಾಗೂ ಕೇಂದ್ರ ದ ಬಿಜೆಪಿ ಪಕ್ಷದ ಎರಡು ವರ್ಷದ ಸಾಧನೆಯ ಕರಪತ್ರ ವಿತರಣಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಪೇಟೆಬೀದಿ ಮುಸ್ಲಿಂ ಬ್ಲಾಕ್ ನಲ್ಲಿ ನಡೆಸಲಾಯಿತು. ಮಳವಳ್ಳಿಪಟ್ಟಣದ ಮುಸ್ಲಿಂ ಬ್ಲಾಕ್ ಹಾಲು ಉತ್ಪಾದಕರ ಸಹಕಾರಸಂಘದ ಮುಂಭಾಗ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಯಮದೂರುಸಿದ್ದರಾಜು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು.ಬಳಿಕ ಮಾತನಾಡಿದ ಡಾ.ಯಮದೂರು ಸಿದ್ದರಾಜು ರವರು ವಿಶ್ವ ಮೆಚ್ಚುವಂತ ನಾಯಕರಾದ ಪ್ರದಾನಿ ಮೋದಿಜೀರವರು ಇಂದು ಹುಟ್ಟಿದ ದಿನ.ಈಗಾಗಲೇ ದೇಶವನ್ನು ಎರಡು ಬಾರಿ ಮುನ್ನಡೆಸಿ ವಿಶ್ವ ವೇ ನಮ್ಮ ಭಾರತದತ್ತ ತಿರುಗಿನೋಡುವಂತೆ ಮಾಡಿದ ಪ್ರದಾನಿ ಅವರು ಇನ್ನೂ ಎರಡು ಅವಧಿಗಳ ಕಾಲ ಪ್ರದಾನಿಯಾಗಿ ದೇಶವನ್ನು ಅಭಿವೃದ್ಧಿ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದರು. ವಿಶ್ವ ವ್ಯಾಪ್ತಿಯಲ್ಲಿ ಕೋರಾನಾ ಹೆಚ್ಚಾಗುತ್ತಿದ್ದು, ದೇಶ ಹಾಗೂ ರಾಜ್ಯ ದಿನದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರಧಾನಿ ಮೋದಿಜೀ ಹಾಗೂ ರಾಜ್ಯದಲ್ಲಿಮುಖ್ಯಮಂತ್ರಿ ಯಡಿಯೂರಪ್ಪ ರವರು ಕೋವಿಡ್ 19 ನಿಯಂತ್ರಣ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದರು. ನಮ್ಮ ಜೀವ ಜೀವನ ನಮ್ಮ ಕೈಯಲ್ಲಿ ಎಂಬುದನ್ನು ಪ್ರತಿಯೊಬ್ಬ ತಿಳಿದುಕೊಂಡು ನಡೆಯಬೇಕು ಎಂದರು.ಮಳವಳ್ಳಿ ತಾಲ್ಲೂಕಿನಲ್ಲೂ ಕೋವಿಡ್ 19 ಹೆಚ್ಚಾಗುತ್ತಿದ್ದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ರವಿ, ಹಿರಿಯ ಮುಖಂಡ ಶಿವಲಿಂಗಯ್ಯ, ಬಿಜೆಪಿ ಪಟ್ಟಣದ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ರಾಜೀವ್, ರಾಜು,ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ: ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿಮಳವಳ್ಳಿ

Click to comment

Trending

Exit mobile version