ತಿಪಟೂರು: ರಾಜ್ಯ ಸಭಾ ಸದಸ್ಯ ರಾದ ಶ್ರೀ ಅಶೋಕ್ ಗಸ್ತಿ ರವರ ಸಾವು ಸವಿತಾ ಸಮಾಜಕ್ಕೆ ತುಂಬ ಲಾಗದನಷ್ಟವಾಗಿದೆ, ಎಂದು ರಾಜ್ಯ ಸವಿತಾ ಸಮಾಜದ ಮಾಜಿ ರಾಜ್ಯ ಖಜಾಂಚಿ ಟಿ.ಎನ್.ನಾಗರಾಜು ರವರು ತಿಳಿಸಿದರು,ಅವರು ತಿಪಟೂರು ತಾಲ್ಲೂಕು ಸವಿತಾ ಸಮಾಜದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತ ಬಿಜೆಪಿ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರೂ ಆದ ಇವರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಜೂನ್ ನಲ್ಲಿ ರಾಜ್ಯ ಸಭಾ ಸದಸ್ಯ ರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು, ಇವರು ಸವಿತಾ ಸಮಾಜಕ್ಕೆ ಸಾಮಾಜಿಕ ನ್ಯಾಯ ಮತ್ತು ಒಳಮೀಸಲಾತಿ ಗಾಗಿ ಹೋರಾಟ ಮಾಡುವ ಭರವಸೆ ನೀಡಿದ್ದರು,ಆದರೆ ವಿಧಿ ಇವರಿಗೆ ಆ ಅವಕಾಶ ನೀಡದಿರುವುದು ಭಗವಂತ ನಮಗೆ ಮಾಡಿದ ದ್ರೋಹವಾಗಿದೆ ಎಂದರು.ಕಾರ್ಯಕ್ರಮ ದಲ್ಲಿ ತಾಲ್ಲೂಕು ಅಧ್ಯಕ್ಷ ರಾದ ಎ.ಲೋಕೇಶ್, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಾಗರಾಜ್,ಗೌರವ ಕಾರ್ಯದರ್ಶಿ ಎಂ.ಸಿ.ಗೋವಿಂದರಾಜು, ಸಮಾಜದ ಮುಖಂಡರಾದ ನರಸಿಂಹಯ್ಯ,ಮುತ್ತುರಾಜ್,ವರದರಾಜು, ಟಿ.ಸಿ.ಗೋವಿಂದರಾಜು, ಎಸ್.ಕುಮಾರ್, ಮಂಜುನಾಥ್, ಶ್ರೀನಿವಾಸ್, ರಾಜ್ ಕುಮಾರ್,ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಶೋಕ್ ಗಸ್ತಿ ರವರ ಫೋಟೋ ಗೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷ ಗಳ ಕಾಲ ಮೌನಾಚರಣೆ ಮಾಡಲಾಯಿತು.
ವರದಿ-ಸಿದ್ದೇಶ್ವರ ಸಿಎನ್.ಎಕ್ಸ್ ಪ್ರೆಸ್ ಟಿವಿ ತಿಪಟೂರು.