ಶಹಾಪುರ : ಕಳೆದ ನಲವತ್ತು ವರ್ಷಗಳಿಂದ ಪುಸ್ತಕ ಹಾಗೂ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಾ ತಾಲ್ಲೂಕಿಗೆ ಜ್ಞಾನ ಭಂಡಾರವನ್ನು ತೆರೆದಿಡುವುದರ ಜೊತೆಗೆ ಪುಸ್ತಕ ಓದುವ ಗೀಳನ್ನು ಬೆಳೆಸಿದಂತೆ ಹಾಗೂ ಪುಸ್ತಕ ಪ್ರೇಮಿ ಹಿರಿಯ ಜೀವಿ ರಘುನಾಥರಾವ್ ಜಿ. ತಿಳಗೂಳ(85) ವಿಧಿವಶರಾದರು.ಶನಿವಾರ ಬೆಳಗ್ಗೆ 10 ಗಂಟೆಗೆ ಶವ ಸಂಸ್ಕಾರ ನೆರವೇರಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸುಪುತ್ರ ಶಹಾಪುರ ತಾಲ್ಲೂಕು ವಿಜಯವಾಣಿ ಪತ್ರಿಕೆ ವರದಿಗಾರರ ಪ್ರಹ್ಲಾದ ತಿಳಗೂಳ ಹಾಗೂ ಸಹೋದರ ನಿವೃತ್ತ ಶಿಕ್ಷಕರಾದ ಮಧುಸೂದನ್ ತಿಳಗೂಳ ಜೊತೆಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ..