ರಾಯಚೂರು : ರಾತ್ರಿ ಸುರಿದ ಭಾರಿ ಮಳೆಗೆ ರಾಯಚೂರು ಜೆಸ್ಕಾಂ ಗ್ರಾಮೀಣ ಉಪವಿಭಾಗಿಯ ಕಛೇರಿಗೆ ನೀರು ನುಗ್ಗಿದ್ದು ನೂರಾರು ಟ್ರಾಂನ್ಸ್ ಫಾರ್ಮರ್ ನೀರಿನಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಸಾಕಷ್ಟು ಹಾನಿಯುಂಟಾಗಿದ್ದು ಜಿಲ್ಲೆಗೆ ಬೆಳಕು ನೀಡುವ ಜಸ್ಕಾಂ ಇಲಾಖೆಗೆ ನೀರು ನುಗ್ಗಿ ಆವರಣದಲ್ಲಿಡಲಾಗಿದ್ದ ನೂರಾರು ಟ್ರಾನ್ಸಫಾರ್ಮರ್ಸ ಗಳು ನೀರಿನಲ್ಲಿ ಮುಳುಗಿದ್ದು ಸಾಲಷ್ಟು ಹಾನಿ ಉಂಟಾಗಿದೆ. ರಾಯಚೂರು ಗ್ರಾಮೀಣ ಪ್ರದೇಶದ ಗ್ರಾಮಗಳ ಟ್ರಾನ್ಸಫಾರ್ಮರ್ಸ ದುರಸ್ತಿ ಇಲ್ಲೆ ಮಾಡಲಾಗುತ್ತಿತ್ತು. ನೀರಿನಲ್ಲಿ ಹೊಸಾ, ಸುರಸ್ತಿ ಮಾಡಿದ ಮತ್ತು ದುರಸ್ತಿಗೆ ಬಂದ ನೂರಾರು ಟ್ರಾನ್ಸಫಾರ್ಮರ್ಸ ನೀರಿನಲ್ಲಿ ಮುಳುಗಿದ್ದು ಇದೀಗ ರಾತ್ರಿ ಸುರಿದ ಮಳೆಗೆ ಅನೇಕ ಹಳ್ಳಿಗಳ ಟ್ರಾನ್ಸಫಾರ್ಮರ್ಸ ಸುಟ್ಟುಹೋಗಿದ್ದು ಮುಂದೆ ಹೇಗೆ ಪೂರೈಸುತ್ತಾರೋ ಎಂಬ ಪ್ರಶ್ನೆ ಕಾಡುತ್ತಿದೆ.
ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು