Uncategorized

ಸಿಎಂ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ- ಶ್ರೀಕಾಂತಗೌಡ ಸುಬೆದಾರ..!

Published

on

ಶಹಾಪುರ: ಬಹುಷಃ ದಕ್ಷಿಣ ಭಾರತ ಹಿತಿಹಾಸದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದ ಏಕೈಕ ನಾಯಕ ಎಂದರೆ ನಮ್ಮ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ತಳಮಟ್ಟದಿಂದ ಅವರು ಪಕ್ಷ ಸಂಘಟನೆ ಮಾಡಿದ್ದಾರೆ ಅವರ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಎಂದು ಬಿಜೆಪಿ ಮಾಜಿ ಯುವ ಮೋರ್ಚಾ ಘಟಕದ ಅಧ್ಯಕ್ಷರಾದ ಶ್ರೀಕಾಂತಗೌಡ ಸುಬೇದಾರ ಎಚ್ಚರಿಕೆ ನೀಡಿದ್ದಾರೆ.ಅವರು ಮುಖ್ಯಮಂತ್ರಿ ಆದಾಗಿನಿಂದ ರಾಜ್ಯದಲ್ಲಿ ಒಂದಾದ ಮೇಲೆ ಒಂದು ಸಮಸ್ಯೆಗಳು ಬರುತ್ತಿದ್ದಾವೆ. ಅತಿಯಾದ ಮಳೆ ಇಂದ ಸಾಕಷ್ಟು ಸಮಸ್ಯೆಗಳು ಎದುರಾದರು ಕೂಡ ಅದನ್ನು ಅತ್ಯಂತ ಸರಳ ರೀತಿ ಇಂದ ನಿಭಾಯಿಸಿಕೊಂಡು ಹೋಗುವದರಲ್ಲೇ ಕರೋನಾ ಎಂಬ ಮಹಾ ಮಾರಿ ಇಂದ ಜಗತ್ತೇ ತತ್ತರಿಸಿದ್ರೆ ನಮ್ಮ ರಾಜ್ಯದಲ್ಲಿ ಸುಮಾರು ದಿನಗಳ ವರೆಗೆ ಜನತೆ ನೆಮ್ಮದಿಯಿಂದ ಬದುಕುವಂತೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು. ಅತ್ಯಂತ ಪ್ರಭಾವಿ ಮುಖ್ಯಮಂತ್ರಿಯಾಗಿದ್ದಾರೆ.ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹರಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅಲ್ಲದೆ ಇನ್ನು ರಾಜ್ಯದಲ್ಲಿ ಅವರಿಂದ ಸಾಕಷ್ಟು ಅಭಿವೃದ್ಧಿ ನಿರೀಕ್ಷೆ ಮಾಡುತ್ತಿರುವ ಎಲ್ಲಾ ವರ್ಗದ ಜನರು ಇದನ್ನು ಯಾವದೇ ಕಾರಣಕ್ಕೂ ಒಪ್ಪಿಕೊಳ್ಳುವದಿಲ್ಲ, ಅಲ್ಲದೆ ರಾಜ್ಯದ ಯುವಕರ ಕಣ್ಮಣಿ ಬಿ ವೈ ವಿಜಯೇಂದ್ರ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಮಾತನಾಡುವದು ಸರಿಯಲ್ಲ ಎಂದು ಹೇಳಿದರು. ಸದ್ಯದ ಪರಸ್ಥಿತಿಯಲ್ಲಿ ಕರ್ನಾಟಕದ ಬಿ ಜೆ ಪಿ ಯುವಕರಿಗೆ ಆಧಾರ ಸ್ಥಬ ವಾಗಿದ್ದರೆ, ರಾಜ್ಯದಲ್ಲಿಯ ಬಹು ಆಕರ್ಷಣೆಯ ಯುವ ನಾಯಕರು ಅಲ್ಲದೆ ಭವಿಷ್ಯದ ನಾಯಕರು ಅವರಾಗಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿಗಳ ಮಗನಾಗಿ ಜನತೆಯ ಸೇವೆ ಸಲ್ಲಿಸುತ್ತಿರುವ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಚುಕ್ಕಾಣೆ ಹಿಡಿಯುವ ಇಲ್ಲಾ ಸಾಮರ್ಥ್ಯ ಅವರಿಗಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡುವ ಮುಖಂಡರಿಗೆ ಅವರ ಹಿಂದೆ ರಾಜ್ಯದಲ್ಲಿ ಅವರನ್ನು ನೆಚ್ಚಿಕೊಂಡ ಅಸಂಖ್ಯಾತ ಅಭಿಮಾನಿಗಳ ಬಳಗವೇ ಇದೆ ಎಂಬುವದನ್ನು ಅರಿತು ಮಾತನಾಡಲಿ ಎಂದು ಈ ಮೂಲಕ ಎಚ್ಚರಿಸುತ್ತೇನೆ.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version