ಸಿಂಧನೂರು

ಜ್ವಲಂತ ಸಮಸ್ಯೆ ಪರಿಹಾರ ಮಾಡಬೇಕು ಇಲ್ಲವಾದರೆ ಕುಷ್ಟಗಿ ರಸ್ತೆ ಬಂದ್ ಮಾಡಿ ಹೋರಾಟದ ಎಚ್ಚರಿಕೆ ನೀಡಿದ – ವಾರ್ಡ್ ನಿವಾಸಿ ವಿರುಪಣ್ಣ..!

Published

on

ಸಿಂಧನೂರು : ಗಂಗಾ ನಗರದಲ್ಲಿರುವ ಜ್ವಲಂತ ಸಮಸ್ಯೆಗಳ ಪರಿಹಾರ ಮಾಡಬೇಕು ಇಲ್ಲವಾದರೆ ಕುಷ್ಟಗಿ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ವಾರ್ಡ್ ನಿವಾಸಿ ವಿರುಪಣ್ಣ ಎಚ್ಚರಿಕೆ ನೀಡಿದರು. ನಗರದ ಗಂಗಾನಗರದಲ್ಲಿ ಜ್ವಲಂತ ಸಮಸ್ಯೆಗಳಾದ ರಸ್ತೆ, ಕುಡಿವ ನೀರು, ಚರಂಡಿ, ವಿದ್ಯುತ್, ಇತರೆ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಹತ್ತು ಹಲವು ಬಾರಿ ಪೌರಾಯುಕ್ತರಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ಬಗೆ ಹರಿಸುವಂತೆ ಮನವಿ ಮಾಡಿದರೂ ಪೌರಾಯುಕ್ತರು ಸ್ಪಂದಿಸದೇ ಇರುವ ಕಾರಣ ಕುಷ್ಟಗಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಕೂಡಲೇ ಇನ್ನೂ ಎರಡೂ ಮೂರು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು ತಪ್ಪಿದರೆ ಹೋರಾಟ ಮಾಡಲಾಗುತ್ತದೆ. ಎಂದು ವಾರ್ಡಿನ ನಿವಾಸಿಯಾದ ವಿರುಪಣ್ಣ ಅವರು ಪತ್ರಿಕೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version