ಮೈಸೂರಿನ ಹೆಚ್.ಡಿ.ಕೋಟೆಗೆಬಂಡಿಪುರ ಹಾಗೂ ನಾಗರಹೊಳೆ ಅಭಯಾರಣ್ಯದ ಬಾರ್ಡರ್ ಇದೆ. ಎರಡು ಕಡೆ ಇರುವ ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತವೆ. ಜಿ.ಎಂ.ಹಳ್ಳಿಯಲ್ಲಿ ರೈತರು ಹಸನಾಗಿ ಬೆಳೆದಿದ್ದ ಬಾಳೆ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನು ತಿಂದು, ತುಳಿದು ಧ್ವಂಸ ಮಾಡಿವೆ. ಕಾಡಿನಿಂದ ನಾಡಿನತ್ತ ಆನೆಗಳು ಬರದಂತೆ ತಡೆಯುತ್ತೇವೆ ಎಂದು ಅರಣ್ಯ ಇಲಾಖೆಯರು ಹೇಳುತ್ತಾರೆಯೇ ಹೊರತು ಈ ತನಕ ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗೆ ಆದರೆ ನಾವು ತೀವ್ರ ರೀತಿಯ ಹೋರಾಟ ಮಾಡುತ್ತೇವೆ ಎಂದು ಅರಣ್ಯ ಇಲಾಖೆಯನ್ನು ಎಚ್ಚರಿಸಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು