ಮಳವಳ್ಳಿ: ವೃದ್ದೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆಗೈದ ಶವವನ್ನು ಸುಟ್ಟುಹಾಕಿದ ಭೂಪನನ್ನು ಬೆಳಕವಾಡಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದ ಸುರೇಶ ಎಂಬುವವನೇ ಕೊಲೆಗೈದ ಆರೋಪಿಯಾಗಿದ್ದು. ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮ ಜಯಮ್ಮ (55) ಎಂಬುವಳೇ ಕೊಲೆಯಾದ ಮಹಿಳೆ. ಜಯಮ್ಮ ಕಿರಿಯ ಮಗ ಕುಮಾರ ರವರು ತನ್ನ ತಾಯಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನಲೆಯಲ್ಲಿ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದಾಗ ಜಯಮ್ಮಳ ಪಕ್ಕದ ಮನೆ ವಾಸಿ ಸುರೇಶ್ ಸಹ ಇಲ್ಲದ ಬಗ್ಗೆ ವಿಚಾರಿಸಿದಾಗ. ಸುರೇಶ್ ಪತ್ತೆಗೆ ಬೆಳಕವಾಡಿ ಪೊಲೀಸರು ಕಾರ್ಯಚರಣೆಗೆ ತಂಡ ರಚಿಸಿ ಶೋಧನೆ ವೇಳೆ ಜವನಗಹಳ್ಳಿ ಬಳಿ ಕಾರಿನಲ್ಲಿ ನಿಂತಿದ್ದಾಗ ವಿಚಾರಿಸಿ ಕಾರು ಸಮೇತ ಸುರೇಶನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೃತ ಜಯಮ್ಮ ಳನ್ನು ಕಾರಿನಲ್ಲಿ ಕರೆದುಕೊಂಡು ಕೊಳ್ಳೇಗಾಲದಿಂದ ಚಿಕ್ಕಬಾಗಿಲು ಗ್ರಾಮಕ್ಕೆ ಬರುವಾಗ ಸುರೇಶ ಹಾಗೂ ಜಯಮ್ಮ ಇಬ್ಬರ ಹಣ ವಿಚಾರಕ್ಕೆ ನಡುವೆ ಮಾತಿನ ಚಕಮುಕಿ ನಡೆದಿದ್ದು, ಧನಗೆರೆ ಗ್ರಾಮದ ಬಳಿವಿರುವ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದು, ಎರಡುದಿನ ಕಾರಿನಲ್ಲೇ ಶವವಿಟ್ಟುಕೊಂಡು ತಿರುಗಾಡಿ ಬಳಿಕ ಮೈಸೂರು ಬಳಿವಿರುವ ವರುಣ ನಾಲೆ ಬಳಿ ತೆಗೆದುಕೊಂಡು ಹೋಗಿ ಅಲ್ಲಿ ಶವವನ್ನು ಮತ್ತೆ ಸುಟ್ಟು ಹಾಕಿರುವುದಾಗಿ ಪೊಲೀಸರ ವಿಚಾರಣೆ ಸಂಧರ್ಭದಲ್ಲಿ ಒಪ್ಪಿಕೊಂಡಿದ್ದು, ಪೊಲೀಸರ ಮೂಲಗಳಿಂದ ತಿಳಿದು ಬಂದಿದೆ. ಈ ಸಂಬಂಧ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ