ವಿಜಯಪುರ

ಸಂವಿಧಾನಕ್ಕೆ ಚ್ಯುತಿ ತಂದ ರಾಜ್ಯ ಸರ್ಕಾರ..!

Published

on

ವಿಜಯಪುರ: ಕೊರೊನಾ ವೈರಸ್ ಮದ್ಯ ಎಸ್ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ತಳವಾರ ಮತ್ತು ಪರಿವಾರ ಸಮುದಾಯದ ಜನರಿಂದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ನಾನಾಗೌಡ ಪಾಟೀಲ್ ಬೆಂಬಲ ನೀಡಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿನಿ ವಿಧಾನ ಸೌದದ ಮುಂಭಾಗದಲ್ಲಿ ತಳವಾರ & ಪರಿವಾರ ಸಮುದಾಯವರು ಜಾತಿ ಪ್ರಮಾಣ ಪತ್ರಕ್ಕಾಗಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮತಾನಾಡಿದ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ನಾನಾಗೌಡ ಪಾಟೀಲ್ ಮಾತಾನಾಡಿ.ಕೇಂದ್ರ ಸರಕಾರ ನಾಯಕ/ನಾಯ್ಕಡ ಸಮನಾಂತರ ಜಾತಿಯ ಪದಗಳಾದ ತಳವಾರ & ಪರಿವಾರ ಜಾತಿಯನ್ನು ಕೇಂದ್ರ ಸರಕಾರ ಅಧಿಕೃತ ಗೆಜಟ್ ಹೊರಡಿಸಿದೆ.ಆದರೆ ರಾಜ್ಯ ಬಿಜಪಿ ಸರಕಾರ ದ್ವಂದ ನೀತಿಗಳು ,ದ್ವಂದ ಸುತ್ತೊಲೆಗಳು ಹೊರಡಿಸಿ ಈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಅನ್ಯಾಯ ದ ಬಗ್ಗೆ ಕೂಡಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದು ಅಧಿವೇಶನದಲ್ಲಿ ಚೆರ್ಚೆಸಿ ಈ ಸಮುದಾಯ ಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version