ಬೆಂಗಳೂರು : ಎಪಿಎಂಸಿ ಕಾಯ್ದೆ ಹಾಗು ಭೂಸುಧಾರಣಾ ಕಾಯ್ದೆ ವಿರೋಧಿಸಿ ನಾಳೆ ರೈತ ಸಂಘಟನೆ ಹೆದ್ದಾರೆ ಬಂದ್ ನಡೆಸಲು ತೀರ್ಮಾನ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಎಪಿಎಂಸಿ ಕಾಯ್ದೆ ವಿರೋಧಿಸಿ ಅಹೋ ರಾತ್ರಿ ಧರಣಿ ನಡೆಯುತ್ತಿದ್ದು, ಇದೀಗ ನಾಳೆ ಹೆದ್ದಾರಿ ಬಂದ್ಗೆ ಕರೆ ನೀಡಲಾಗಿದೆ. ಹೀಗಾಗಿ ನಾಳೆ ಬಹುತೇಕ ಟ್ರ್ಯಾಫಿಕ್ ಜ್ಯಾಮ್ ಸಾಧ್ಯತೆ ಇದೆ ಎನ್ನಲಾಗಿದೆ.
ಯಾವ ಯಾವ ರಸ್ತೆಗಳು ಬಂದ್ ?
•ತುಮಕೂರು- ಬೆಂಗಳೂರು
•ಬೆಂಗಳೂರು – ಹೈದರಾಬಾದ್
•ಬೆಂಗಳೂರು- ಕನಕಪುರ ರಸ್ತೆ
•ಬೆಂಗಳೂರಿಗೆ ಕಲ್ಪಿಸುವ ಎಲ್ಲಾ ಹೆದ್ದಾರಿ ಬಂದ್
ಇನ್ನು ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ 10 ಕ್ಕೂ ಹೆಚ್ಚು ರಸ್ತೆಗಳನ್ನ ಬಂದ್ ಮಾಡಲಾಗುತ್ತೆ. ನಾಳೆ ಆನಂದ್ ರಾವ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಅರಂಭವಾಗಲಿದ್ದು, 2-3 ಸಾವಿರ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು