ಈ ವರ್ಷದ ಮಳೆಗಾದಲ್ಲಿ ಮೂರನೆ ಬಾರಿಗೆ ಘಟಪ್ರಭಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು ನದಿಯ ಪಕ್ಕ ಗೋಕಾಕ್ ತಾಲೂಕಿನ ಢವಳೇಶ್ವರ ಗ್ರಾಮದ ಹತ್ತಿರ ವ್ಯಕ್ತಿಯೊರ್ವ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ ಕಳದ ಹತ್ತು ಹದಿನೈದು ದಿನಗಳಿಂದ ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ನೇರ ನದಿಗೆ ಸೇರುವ ಈ ಮಳೆನೀರಿನಿಂದ ನದಿಯ ನೀರಿನ ಪ್ರಮಾಣ ಎರಡೆ ದಿನದಲ್ಲಿ ಹೆಚ್ಚಾಗಿ ಬೆಳಗಾವಿ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಹೊಂದುವ ಮೂರು ಸೇತುವೆಗಳು ಜಲಾವೃತಗೊಂಡಿವೆ ಇದರ ಮದ್ಯ ಇಂದು ಗೋಕಾಕ್ ತಾಲೂಕಿನ ವ್ಯಾಪ್ತಿಗೆ ಬರುವ ಢವಳೇಶ್ವರ ಹತ್ತರ ನೀರಿನಲ್ಲಿ ಹರಿದುಕೊಂಡು ಹೋಗುತ್ತಿರುವುದು ಅಲ್ಲಿನ ಜನರ ಕಣ್ಣಿಗೆ ಬಿಂದಿದೆ ತಕ್ಷಣ ಜನರು ಕೂಡಾ ಅವನನ್ನು ಕಾಪಾಡಲು ಯತ್ನಿಸುತ್ತಿರುವಾಗಲೇ ನೀರಿನ ಸೆಳೆತಕ್ಕೆ ಸೇತುವೆ ಕೆಳಗಡೆ ಮುಳುಗಿ ಮುಂದೆ ಸ್ವಲ್ಪ ದೂರದಲ್ಲಿ ಮತ್ತೆ ಮೇಲಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಮುಧೋಳ