ಮಳವಳ್ಳಿ: ಕಾಡಿನ ಅಂಚಿನಲ್ಲಿ ಮೇಕೆ ಮೇಯಿಸಲು ಹೋದ ಸಂದರ್ಭದಲ್ಲಿ ಎರಡು ಚಿರತೆಗಳು ಮೇಕೆಗಳ ಮೇಲೆ ದಾಳಿ ನಡೆಸಿ 6 ಮೇಕೆಗಳನ್ನು ಬಲಿತೆಗೆದುಕೊಂಡ ಘಟನೆ ಮಳವಳ್ಳಿ ತಾಲೂಕು ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತನಾದ ಮಾದೇಗೌಡರವರು ಮೇಕೆಯಾಗಿದ್ದು ನೊಂದ ರೈತನ ಹತ್ತಿರ ಒಟ್ಟು 24 ಮೇಕೆ ಗಳಿದ್ದು ಅದರಲ್ಲಿ 6 ಮೇಕೆಗಳನ್ನು ಚಿರತೆಗಳು ತಿಂದಿವೆ.ರೈತನ 6ಮೇಕೆಗಳು ಕಾಣೆಯಾಗಿದ್ದು ಲಕ್ಷಾಂತರ ರೂ ನಷ್ಟು ಉಂಟಾಗಿದೆ ,ಹಲಗೂರು ಹೋಬಳಿಯ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ವನ್ಯ ಜೀವಿಗಳ ಹಾವಳಿ ನಿರಂತರವಾಗಿದ್ದು ತಡೆಯುವಲ್ಲಿ ಅರಣ್ಯ ಇಲಾಖೆ ಸೋತಂತ್ತಿದೆ ಎಂದು ಮಾದೇಗೌಡ ಅವರ ಅಳಲನ್ನು ಹೇಳಿಕೊಂಡರು ಅರಣ್ಯ ಸಿಬ್ಬಂದಿ ಇಲಾಖೆಗೆ ಗೊತ್ತಾದ ತಕ್ಷಣ ಸ್ಥಳಕ್ಕೆ ಧಾವಿಸಿದ ವನಪಾಲಕರು ಆದಂತಹ ಸಿದ್ದರಾಮ ಪೂಜಾರಿ ಮತ್ತು ಪ್ರಕಾಶ್ ಅವರು ರೈತನಿಗೆ ಸಾಂತ್ವನ ಹೇಳಿದರು. ರೈತ ಮಾದೇಗೌಡರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದರಾಮ ಪೂಜಾರಿ ಮತ್ತು ಪ್ರಕಾಶ್ ಅವರು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ