ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಗುರುಗುಂಟಾ ನಿವಾಸಿಯಾಗಿದ್ದ ಖಾಜಾಬೇಗಂ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ಖಾಜಾಬೇಗಂ ಶವವನ್ನು ಕುಟುಂಬಸ್ಥರು ತೆಗೆದುಕೊಂಡು ಬಂದಿದ್ದರು, ಆದ್ರೆ ಇಲ್ಲಿ ವೈಧ್ಯರ ಕೊರತೆ ಇದೆ ಎಂದು ಟಿ.ಎಚ್.ಒ ಅಮರೇಶ ಪಾಟೀಲ್ ಸಬೂಬು ಹೇಳಿದ್ದಾರೆ. ಶವವನ್ನು ಪೊಸ್ಟ್ ಮಾರ್ಟಮ್ ಮಾಡಿ ಬಾಡಿ ಕೊಡಿ ಎಂದಿದ್ದ ಖಾಜಾಬೇಗಂನ ಸಹೋದರ ಕೇಳಿದರೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ತಾಲೂಕು ವೈಧ್ಯಾಧಿಕಾರಿ ಹಾಗೂಕುಟುಂಬಸ್ಥರ ನಡುವೆ ವಾಗ್ವಾದಕ್ಕೆ ಇಳಿದಿದ್ದಾರೆ. ಖಾಜಾಬೇಗಂ ತಹಶಿಲ್ದಾರ್ ರೆಫರ್ ಮಾಡುವವರೆಗೆ ನಾವು ಪೊಸ್ಟ್ ಮಾರ್ಟಮ್ ಮಾಡುವದಿಲ್ಲಾ ಎಂದು ಟಿ.ಎಚ್ ಒ ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಟ್ಟಿ ಚಿನ್ನದ ಗಣಿ ಪೊಲೀಸರು ಭೇಟಿ ನೀಡಿದ್ದಾರೆ. ಯಾರಿಗೆ ಹೇಳುತ್ತೀರಿ ಹೇಳಿಕೊಳ್ಳಿ ಎಂದು ತಾಲೂಕು ವೈಧ್ಯಧಿಕಾರಿ ನಿರ್ಲಕ್ಷ್ಯತನದ ಮಾತುಗಳನ್ನಾಡಿದ್ದಾರೆ. ಇವರ ಈ ಊಡಾಫೇ ಮಾತಗಳ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು