ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಯುವ ಬ್ರಿಗೇಡ್ ನಿಂದ ಆತ್ಮನಿರೀಕ್ಷಣಾ ಸತ್ಯಾಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಶ್ರೀ ಗಜದಂಡ ಶಿವಾಚಾರ್ಯರು ಬ್ರಹನ್ಮಠ ದೇವರಭೂಪುರ ಹಾಗೂ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಜದಂಡ ಸ್ವಾಮೀಜಿ ಯುವಕರಲ್ಲಿ ದೇಶ ಭಕ್ತಿಯ ಕೊರತೆ ಇದ್ದು ಇಂತಹ ಕಾರ್ಯಕ್ರಮಗಳಿಂದ ಯುವ ಜನತೆ ಹೆಚ್ಚೆತುಕೊಳ್ಳಲಿ ಎಂದು ಹೇಳಿದರು.ನಂತರ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ ವ್ಯಸನ ಮುಕ್ತ ಆಂದೋಲನ ಮಹಾಂತ ಜೋಳಿಗೆ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚಾರ ಮಾಡಿ ಜನರಿಗೆ ದುಶ್ಚಟಗಳಿಂದ ದೂರವಿರಲು ತಮ್ಮ ವ್ಯಸನಗಳನ್ನು ಮುದಗಲ್ ಮಹಾಂತ ಸ್ವಾಮೀಜಿರವರ ಜೋಳಿಗೆಗೆ ಹಾಕಿ ವ್ಯಸನ ಮುಕ್ತ ಸಮಾಜವಾಗಲಿ ಎಂದು ಜಾಗೃತಿ ಮೂಡಿಸಿದರು.
ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.