Uncategorized

ಹಾತ್ರಾಸ್ ಅತ್ಯಾಚಾರ ಪ್ರಕರಣ ಖಂಡಿಸಿ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ..!

Published

on

ನಂಜನಗೂಡು: ಉತ್ತರ ಪ್ರದೇಶದ ಹಾಥ್ರಸ್ ನ ಅತ್ಯಾಚಾರ ಪ್ರಕರಣ ಖಂಡಿಸಿ ದಲಿತ ಸಂಘಟಕರಿಂದ ಚಾಮರಾಜನಗರದ ಬೈಪಾಸ್ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಿದರು. ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉತ್ತರಪ್ರದೇಶದ ಈ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ ಮನಿಷಾ ವಾಲ್ಮೀಕಿ ಹಾಗೂ ವಿಮಲ ವಿಕ್ರಂ ಅತ್ಯಾಚಾರದಲ್ಲಿ ಭಾಗಿಯಾಗಿರುವ ಕಾಮುಕರನ್ನು ಗಲ್ಲಿಗೇರಿಸಬೇಕು,ನಿರ್ಭಯಳ ಪ್ರಕರಣದಂತೆ ಮನಿಷಾ ವಾಲ್ಮೀಕಿ ಮತ್ತು ವಿಮಲ ವಿಕ್ರಂ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇನ್ನೂ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಸಿಲ್ದಾರ್ ಮಹೇಶ್ ಕುಮಾರ್ ರಾಜ್ಯಪಾಲರಿಗೆ ನಂಜನಗೂಡಿನ ತಹಸೀಲ್ದಾರ್ ಮುಖಾಂತರ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಲ್ಲಹಳ್ಳಿ ನಾರಾಯಣ ಚುಂಚನಹಳ್ಳಿ ಮಲ್ಲೇಶ್ ನಗರ್ಲೆ ವಿಜಯಕುಮಾರ್ ಶಂಕರಪುರ ಸುರೇಶ್ ಮಂಜು ಸೇರಿದಂತೆ ನೂರಾರು ಪ್ರತಿಭಟನೆಕಾರರು ಸ್ಥಳದಲ್ಲಿ ಹಾಜರಿದ್ದರು.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Click to comment

Trending

Exit mobile version