ಹುಬ್ಬಳ್ಳಿ-ಧಾರವಾಡ

ಯೋಗಿ ಸರ್ಕಾರ ದೇಶಕ್ಕೆ ರೋಗ ತಂದಿದೆ- ಡಿ.ಕೆ ಶಿವಕುಮಾರ್ ವ್ಯಂಗ್ಯ..!

Published

on

ಹುಬ್ಬಳ್ಳಿ: ಆರ್ ಆರ್ ನಗರ ಬೈ ಏಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರ ಡಿ.ಕೆ ರವಿ ಪತ್ನಿಗೆ ಟಿಕೆಟ್ ನೀಡುವುದರ ಬಗ್ಗೆ ರಾಮಲಿಂಗ ರೆಡ್ಡಿ ನೈತೃತ್ವದಲ್ಲಿ ಕಮೀಟಿ ಮಾಡಿದ್ದೆವೆ. ಅವರ ವರದಿ ಮೇಲೆ ನಾಳೆ ಫೈನಲ್ ಮಾಡುತ್ತೆವೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಆರ್ಎನ್ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು ಬೈ ಏಲೆಕ್ಷನ್ ಸ್ಪರ್ಧೆಗೆ ಬಹಳಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೆವೆ, ಇನ್ನೂ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಡ್ರಗ್ಸ್ ಪ್ರಕರಣದಲ್ಲಿ ಅಧಿಕಾರಿಗಳ ಎತ್ತಂಗಡಿ ಮಾಡುತ್ತಿದೆ. ಯಾವ ಮಟ್ಟಿಗೆ ಸರ್ಕಾರಕ್ಕೆ ಒತ್ತಡ ಇದೆ ಅಂತ ಇದ್ರಿಂದಲೇ ಗೊತ್ತಾಗುತ್ತೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ನಾನೇನು ಮಾತನಾಡೋದಿಲ್ಲ, ಸರ್ಕಾರ ಇರುತ್ತೋ ಇಲ್ವೋ ಎನ್ನೋ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರ ಸರ್ಕಾರದ ಆಂತರಿಕ ಹುಳುಕುಗಳು ಇವಾಗ ಹೊರಗೆ ಬರುತ್ತೆ ಕಾದು ನೋಡಿ ಎಂದು ವ್ಯಂಗ್ಯವಾಡಿದದರು. ಹತ್ರಾಸ್ ರೇಪ್ ಪ್ರಕರಣ ಯೋಗಿ ಸರ್ಕಾರ ದೇಶಕ್ಕೆ ರೋಗ ತಂದಿದೆ. ರೇಪ್ ಆಗಿದೆ ಎನ್ನೋದು ಇಡೀ ದೇಶಕ್ಕೆ ಗೊತ್ತು ಆದರೂ ಇನ್ನು ಯುಪಿ ಎಫ್ ಆರ್ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version