ಮುಳಬಾಗಿಲು: ಅರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ದಾರರ ನ್ಯಾಯ ಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸುವಂತೆ ಒತ್ತಾಯಿಸಿ ಇಂದು ಮುಳಬಾಗಿಲು ತಹಶಿಲ್ದಾರರಿಗೆ ಮನವಿ ಸಲ್ಲಿದರು. ಅರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಹೊರ ಗುತ್ತಿಗೆ ದಾರರಿಗೆ ಅನ್ಯವಾಗುತ್ತಿದೆ. ಇಲಾಖೆಯಿಂದಲೇ ನೇರವಾಗಿ ಹೊರಗುತ್ತಿಗೆ ದಾರರ ಖಾತೆ ವೇತನ ಬಿಡುಗಡೆಯಾಗ ಬೇಕಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳು ಎನ್ ಹೆಚ್ ಎಂ ಅಡಿಯಲ್ಲಿ ಕೆಲಸಮಾಡುವ ಹೊರಗುತ್ತಿಗೆ ನೌಕರರಿಗೂ ಸೌಲಭ್ಯ ಸಿಗಬೇಕು ನೇಮಕಾತಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಮೊದಲ ಅದ್ಯತೆ ಸಿಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು..
ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು