ಬೆಂಗಳೂರು

ಡ್ರಗ್ಸ್ ಪ್ರಕರಣ : ಕೇರಳ ರಾಜಕಾರಣಿ ಪುತ್ರನಿಗೆ ಇ.ಡಿ ಅಧಿಕಾರಿಗಳಿಂದ ಡ್ರಿಲ್..!

Published

on

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಕೇರಳ ರಾಜಕಾರಣಿ ಪುತ್ರ ಬಿನೇಶ್ ಕೊಡಿಯೇರಿಯನ್ನ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ ಬಿನೇಶ್ರನ್ನ, ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನೂಪ್, ಹೇಳಿಕೆ ಆಧಾರದ ಮೇಲೆ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ. ಮೊಬೈಲ್ ಕಾಲ್ಲಿಸ್ಟ್ ಪಡೆದಿರುವ ಇಡಿ ಅಧಿಕಾರಿಗಳು ಬಿನೇಶ್ಗೆ ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.ಅಲ್ಲದೇ ಇ.ಡಿ ವಿಚಾರಣೆಗೆ ಬರುವ ಮುನ್ನವೇ ಬ್ಯಾಂಕ್ ದಾಖಲೆಗಳ ಫೈಲ್ ಸಮೇತ ಬಿನೇಶ್ ವಿಚಾರಣೆಗೆ ಹಾಜರಾಗಿದ್ದಾರೆ. ಆರೋಪಿ ಅನೂಪ್ಗೆ ಹಣ ವರ್ಗಾವಣೆ ಮಾಡಿರುವ ಸೇರಿದಂತೆ ಪ್ರಕರಣಕ್ಕೆ ಅವಶ್ಯಕತೆ ಇರುವ ಎಲ್ಲಾ ದಾಖಲೆಗಳನ್ನ ಇ.ಡಿ ಅಧಿಕಾರಿಗಳಿಗೆ ನೀಡಿದ್ದು, ಎಲ್ಲಾ ದಾಖಲೆಗಳನ್ನ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version