ಸಿಂಧನೂರು

ಪೋಲಿಸರಿಂದ ಮಿಂಚಿನ ಕಾರ್ಯಾಚರಣೆ 22ಕೆ.ಜಿ ಗಾಂಜಾ ಜಪ್ತಿ- ಸಾರ್ವಜನಿಕ ವಲಯದಿಂದ ಮೆಚ್ಚುಗೆ..!

Published

on

ಸಿಂಧನೂರು: ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ರೆಡ್ಡಪ್ಪ ತಂದೆ ತುಕಾಲಿ ಈರಪ್ಪ ಎನ್ನುವ ವ್ಯಕ್ತಿ ತನ್ನ ಮನೆ ಸುತ್ತಮುತ್ತಲೂ ಗಾಂಜಾ ಗಿಡಗಳ ಬೆಳೆಯನ್ನು ಬೆಳೆದಿದ್ದಾರೆಂಬಾ ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಚರಣೆ ನಡೆಸಿ. ಸುಮಾರು 22 ಕೆ.ಜಿ 923 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಎಸ್.ಪಿ. ಶ್ರೀ ನಿಕ್ಕಮ್ ಪ್ರಕಾಶ್,ಅಮ್ರಿತ್, ಎಸ್.ಪಿ.ಹರಿಬಾಬು, ಡಿ.ವೈ.ಎಸ್.ಪಿ. ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ದಾಳಿಯನ್ನು ನಡೆಸಿದ್ದು,ಸಿ.ಪಿ.ಐ ಜಿ ಚಂದ್ರಶೇಖರ್ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಐ ರಾಘವೇಂದ್ರ ನೇತೃತ್ವದಲ್ಲಿ ಮನೋಹರ್, ಚನ್ನಬಸವ, ಮೈನುದ್ದೀನ್, ದೇವರೆಡ್ಡಿರವರನ್ನಳಗೊಂಡಿರುವ ತಂಡವನ್ನು ರಚಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಮಿಂಚಿನ ಕಾರ್ಯಾಚರಣೆಗೆ ಸೊಮಲಾಪುರ ಸೇರಿದಂತೆ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ -ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಸಿಂಧನೂರು

Click to comment

Trending

Exit mobile version