ಮುಳಬಾಗಿಲು : ಗ್ರಾಮದ ಗೋಮಾಳ ಜಮೀನು ಆಕ್ರಮವಾಗಿ ಅಕ್ರಮಿಸಿಕೊಂಡ ಕ್ರೈಸ್ತ ಮಿಷನರಿಗಳ ವಿರುದ್ಧ ,ಗ್ರಾಮಸ್ಥರು ಜೊತೆ ಮಜಿ ಶಾಸಕ ವೈ ಸಂಪಗಿ ಸೇರಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿ ನಾಚಹಳ್ಳಿ ಗ್ರಾಮದ ಸರ್ವೇ ನಂಬರ್ 168 ರಲ್ಲಿ 3 ಎಕರೆ ಜಾಗ ಇದ್ದು ಇದರಲ್ಲಿ ಗ್ರಾಮದ ರೈತಾಪಿವರ್ಗದ ಸಾಕುಪ್ರಾಣಿಗಳು,ದನ,ಹಸುಗಳು ಕುರಿ ,ಮೇಕೆಗಳು ಮೇಯಿಸಲು ಇರುವ ಏಕೈಕ ಸರ್ಕಾರದ ಜಮೀನು ಆಗಿದೆ. ಆದರೆ ಕೆಲ ಅಧಿಕಾರಿಗಳು ಅಕ್ರಮವಾಗಿ ಕ್ರೈಸ್ತ ಮಿಷನರಿಗಳಿಗೆ ಶಾಮಿಲಾಗಿ ಕ್ರಮವಾಗಿ ದಾಖಲೆ ಮಾಡಿ ಕೊಡಲು ಮುಂದಾಗಿದ್ದಾರೆ.ಈಗಾಗಲೇ ಗೋಮಾಳ ಜಮೀನಿನ ಲ್ಲಿ ಕ್ರೈಸ್ತ ಸಮಧಾಯದವರು ಏಸು ಶಿಲಭೆ ನಿಲ್ಲಿಸಲು ಮುಂದಾಗಿದ್ದಾರೆ.ಇದರಿಂದ ಗ್ರಾಮದ ಗೋಪಾಲಕರು ನಂಬಿಕೊಂಡ ಸರ್ಕಾರಿ ಜಮೀನು ಕ್ರೈಸ್ತ ರ ಪಾಲಾಗುತ್ತಿದ್ದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ ಮೂಲಕ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಜೊತೆ ಗ್ರಾಮಸ್ಥರು, ಗೋಪಾಲ ಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ತಹಸೀಲ್ದಾರ್ ಗೆ ಮನವಿ ನೀಡಿ ಗೋಮಾಳ ಜಮೀನು ಉಳಿಸಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಏಚ್ಚರಿಕೆ ನಿಡಿದರು.
ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು