ಲಿಂಗಸೂಗೂರು: ಶರಪ್ಪ ಎಂಬಾತ ತನ್ನ ಜಮೀನಿನಲ್ಲಿ ಹತ್ತಿಯನ್ನು ಬೆಳೆದಿದ್ದ, ಹತ್ತಿಯ ಜೊತೆಗೆ ಯಾರಿಗೂ ತಿಳಿಯದಂತೆ ಮಧ್ಯದಲ್ಲಿ ಸುಮಾರು 13.ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿರು ಘಟನೆ ಲಿಂಗಸೂಗೂರು ತಾಲೂಕಿನ ವ್ಯಾಕರನಾಳ ಎಂಬಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಇನ್ನೂ ವಿಷಯ ತಿಳಿಯುತ್ತಿದ್ದಂತೆ ಖಚಿತ ಮಾಹಿತಿ ಆಧಾರದ ಮೇಲೆ ತಾಲೂಕಿನ ಡಿವೈಎಸ್ಪಿ, ಮಸ್ಕಿ ಸಿ.ಪಿಐ, ಮುದುಗಲ್ ಪಿಎಸ್ಐ ನೇತೃತ್ವದಲ್ಲಿ ದಾಳಿಯನ್ನು ನಡೆಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸರ್ವೇ ನಂ.1ರಲ್ಲಿ ಸುಮಾರು 1ಲಕ್ಷದ 20 ಸಾವಿರ ಬೆಲೆಬಾಳುವ ಗಾಂಜಾ ಸಿಕ್ಕಿದ್ದು ಪೋಲಿಸರು ಆರೋಪಿಗಳನ್ನು ಬಂಧಿಸಿದ್ದು ಮುದುಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು