ಕೋವಿಡ್-19 ನಿಂದಾಗಿ ಎಲ್ಲಾ ದೇವಸ್ಥಾನಗಳನ್ನು ಬಂದ ಮಾಡಲಾಗಿತ್ತು,ಸುಮಾರು 3, 4 ತಿಂಗಳಿಂದ ದೇವರ ದರ್ಶನ ಪಡೆಯದೇ ಜನರು ಕಂಗಾಲಾಗಿದ್ದರು. ಸರ್ಕಾರ ಲಾಕ್ ಡೌನ್ ಅನ್ನು ತೆರವು ಮಾಡುತ್ತಿದ್ದಂತೆ ಒಂದೊಂದಾಗಿ ಅಂಗಡಿ ಮುಂಗಟ್ಟು ಸೇರಿದಂತೆ ಕೆಲ ದೇವಸ್ಥಾನಗಳೂ ಕೂಡ ಓಪನ್ ಆಗಿದ್ದವು . ಅಕ್ಟೋಬರ್ 16ನೇ ತಾರೀಖಿನಿಂದ ಸುಮಾರು ಐದು ದಿನಗಳ ಕಾಲ ಶಬರಿ ಮಾಲೆಯಲ್ಲಿ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅನುವು ಮಾಡಿಕೊಡಲಾಗುತ್ತಿದೆಯಂತೆ. ಕೋವಿಡ್-19 ಹಿನ್ನೆಲೆ ಕೆಲವು ಮುಂಜಾಗ್ರಾತ ಕ್ರಮಗಳನ್ನು ತೆಗೆದುಕೊಂಡಿರುವ ದೇವಾಸ್ಥಾನದ ಆಡಳಿತ ಮಂಡಳಿ ಒಂದು ಬಾರಿ ದೇವರ ದರ್ಶನಕ್ಕೆ 250 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ ಎಲ್ಲಾ ಸಿದ್ದತೆಗಳನ್ನು ಪೂರ್ತಿಗೊಳಿಸಲಾಗಿದೆ. ಇನ್ನೂ ಕೇರಳ ಸಶಸ್ತ್ರ ಪೊಲೀಸ್ ಪಡೆ (ಕೆಎಪಿ)ಯ ಐದನೇ ಬೆಟಾಲಿಯನ್ ಕಮಾಂಡೆಂಟ್ ಕೆ. ರಾಧಾಕೃಷ್ಣನ್ ಶುಕ್ರವಾರ ದೇಗುಲಕ್ಕೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು