ಹುಬ್ಬಳ್ಳಿ- ಒಬ್ಬ ವ್ಯಕ್ತಿ ಇದ್ದಾಗಲೇ ಮಾತ್ರ ಅವರ ಬ್ಯಾನರ್ ಗೆ ಜನ್ರು ಹಾರ ಹಾಕ್ತಾರೆ, ಅದೇ ಆ ವ್ಯಕ್ತಿ ಇಲ್ಲದಿದ್ದಾಗ ಬ್ಯಾನರ್ ಗಳು ಕಸದ ತೊಟ್ಟೆಯಲ್ಲಿ ಬೀಳುತ್ತವೆ. ಅದಕ್ಕೆ ಸಾಕ್ಷಿ ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ಶ್ರದ್ಧಾಂಜಲಿಯ ಬ್ಯಾನರ್ ಪೋಟೋ….ಹೌದು, ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರು ಕಳೆದ ಒಂದು ವರ್ಷದ ಹಿಂದೆ ನಿಧನ ಹೊಂದಿದ್ದರು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಹ್ಲಾದ್ ಜೋಶಿ ಅವರು ಅವರ ಪೋಟೋವನ್ನು ಬ್ಯಾನರ್ ಮಾಡಿಸಿದ್ದರು. ಆದರೆ ಅದೇ ಬ್ಯಾನರ್ ಈಗ ಹುಬ್ಬಳ್ಳಿಯಲ್ಲಿರುವ ಪ್ರಹ್ಲಾದ್ ಜೋಶಿ ಅವರ ಹಳೆ ಕಚೇರಿಯ ಕಸದ ತೊಟ್ಟಿಯಲ್ಲಿ ಬಿದ್ದಿದೆ. ಇದ್ದರಿಂದ ಗೊತ್ತಾಗುತ್ತೇ ಮನುಷ್ಯ ಬದುಕಿದ್ದಾಗ ಎಷ್ಟೇ ದುಡ್ಡು, ಹೆಸರು ಸಂಪಾದನೆ ಮಾಡಿದರು ಸತ್ತ ಮೇಲೆ ಆತನಿಗೆ ಯಾವುದೇ ಬೆಲೆ ಇಲ್ಲದೇ ಕಸದ ತೊಟ್ಟಿಗೆ ಹಾಕುತ್ತಾರೆ. ಸರ್ಕಾರ ಒಬ್ಬ ಕೇಂದ್ರ ಸಚಿವರಿಗೆ ಯಾವ ರೀತಿ ಗೌರವ ಸೂಚಿಸಬೇಕೊ ಅದನ್ನು ಮರೆತು ಈ ರೀತಿ ಮಾಡಿರುವುದು ಸಚಿವರಿಗೆ ಮಾಡಿರುವ ದೊಡ್ಡ ಅಪಮಾನವಾಗಿದೆ.
ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ