Uncategorized

ಧಾರಾಕಾರ ಮಳೆಗೆ ಮನೆಗಳು ಜಲಾವೃತ..!

Published

on

ಶಹಾಪುರ :ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಂದು ಶಹಾಪುರ ತಾಲ್ಲೂಕಿನ ಕೊಳ್ಳೂರು ಗ್ರಾಮದ ಸುಮಾರು ಹತ್ತಕ್ಕೂ ಮನೆಗಳು ಜಲಾವೃತಗೊಂಡು ತುಂಬಾ ತೊಂದರೆಯಾಗುತ್ತಿದೆ ಸಮಾಜ ಸೇವಕ ಶಿವರೆಡ್ಡಿ ಕೋಳೂರು ಹೇಳಿದರು.ಪುರಾಣದಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಬಡ ಕೂಲಿ ಕಾರ್ಮಿಕರು ಇನ್ನೇನು ಎಚ್ಚೆತ್ತುಕೊಳ್ಳಬೇಕೆಂದು ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾಗಿದ್ದರೆ ಅಲ್ಲದೆ ಇವತ್ತು ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತಗೊಂಡು ಕಾಳು ಕಡಿ ನೀರುಪಾಲಾಗಿವೆ.ಪ್ರತಿ ಬಾರಿ ಮಳೆ ಬಂದಾಗ ಈ ರೀತಿ ನೀರು ನಿಂತು ಭರಿಸುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ ನಾವು ಬಡ ಕೂಲಿ ಕಾರ್ಮಿಕರು ಸಣ್ಣ ಪುಟ್ಟ ಮಕ್ಕಳಿದ್ದಾರೆ, ದನ ಕರುಗಳಿಗೆ ಕೋಳಿ ಕುರಿಗಳಿವೆ ನಾವುಗಳು ಎಲ್ಲವನ್ನೂ ಕಟ್ಟಿಕೊಂಡು ಎಲ್ಲಿ ಹೋಗಿ ಬದುಕಬೇಕು ನೀವೇ ಹೇಳಿ ತಮ್ಮ ಅಳಲನ್ನು ತೋಡಿಕೊಂಡರು.

ವರದಿ: ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version