ವಿಜಯಪುರ : ಭೀಮಾ ತೀರದಲ್ಲಿ ಸಂತ ಶರಣರು ನೆಲಸಿ ಈ ಭೂಮಿಯನ್ನು ಪಾವನ ಮಾಡಿದ್ದಾರೆ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜನ ನಮ್ಮದಾಗಿದೆ. ಜಾತ್ರೆ ಉತ್ಸವಗಳು ನಮ್ಮಲ್ಲಿ ಏಕತೆ ಭಾವವನ್ನು ತುಂಬುತ್ತೆವೆ ಎಂದು ಜೆಡಿಎಸ್ ಪಕ್ಷದ ತಾಲೂಕು ಅದ್ಯಕ್ಷ ಬಿ.ಡಿ.ಪಾಟೀಲ್ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ನಿಂಗರಾಯ ಹಾಗೂ ವೀರಮುತೇಶ್ವರ ದೇವಾಲಯದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ಉದ್ಘಾಟನೆ ಮಾಡಲಾಯಿತು. ಇದರ ಅಧ್ಯಕ್ಷತೆಯನ್ನು ನಿವೃತ್ತ ಭೂಸೇನಾ ನಿಗಮದ ಅಧಿಕಾರಿ ಜೆ.ಎಮ್. ಕೂರಬು ವಹಿಸಿ ಜಾತ್ರೆಗಳು ಭಾವೈಕ್ಯತೆಯ ಸಂಕೇತ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದರು
ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ