ಹುಬ್ಬಳ್ಳಿ-ಧಾರವಾಡ

ರಸ್ತೆ ಗುಂಡಿಗಳಲ್ಲಿ ಕಾಗದದ ಬೋಟ್ ಬಿಡುವ ಮೂಲಕ ಮಕ್ಕಳು ಹಾಗೂ ಸ್ಥಳಿಯರು ವಿನೂತನ ಪ್ರತಿಭಟನೆ!

Published

on

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿರುವ ರಸ್ತೆಗಳನ್ನು ಸುಧಾರಿಸುವಂತೆ ಆಗ್ರಹಿಸಿ ರಸ್ತೆಯಲ್ಲಿನ ಗುಂಡಿಗಳ ನೀರಿನಲ್ಲಿ ಕಾಗದದ ಹಡಗು ಬಿಡುವು ಮೂಲಕ ಸ್ಥಳೀಯ ನಾಯಕರು ಹಾಗೂ ಮಕ್ಕಳು ವಿನೂತನವಾಗಿ ಪ್ರತಿಭಟನೆ ನಡೆಸಿದರು. ನಗರದ ಕಾಟನ್ ಮಾರ್ಕೆಟ್ ನಲ್ಲಿ ಹದಗೆಟ್ಟಿರುವ ರಸ್ತೆಯಲ್ಲಿನ ಗುಂಡಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಹಡಗಿನಲ್ಲಿ ಸಚಿವ ಜಗದೀಶ್, ಶೆಟ್ಟರ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿ ಗುಂಡಿಗಳಲ್ಲಿ ಹಡಗು ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ವರ್ಷಗಳಿಂದ ನಗರದಲ್ಲಿ ರಸ್ತೆಗಳನ್ನು ನಿರ್ಮಿಸುವಲ್ಲಿ ಸಚಿವ ಜಗದೀಶ್ ಶೆಟ್ಟರ್ ವಿಫಲವಾಗಿದ್ದಾರೆ ಆದ್ದರಿಂದ ಕೂಡಲೆ ನಗರದಲ್ಲಿ ಸುಗಮ ರಸ್ತೆ ನಿರ್ಮಾಣ ಮಾಡುವಂತೆ ಸರಕಾರ ಹಾಗೂ ರಾಜ್ಯಕ್ಕೆ ಒತ್ತಾಯಿಸಿದರು.!

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version