ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಮ್ಯಾಕಲದೊಡ್ಡಿ ಹಾಗೂ ಕಮಲದಿನ್ನಿ ಗ್ರಾಮದಲ್ಲಿ ಸುಮಾರು 20 ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿತ್ತು. ಎರಡು ದಿನಗಳಿಂದ ಧಾರಾಕಾರವಾಗಿ ಸರಿಯುತ್ತಿರುವ ಮಳೆಯಿಂದ ಭತ್ತವೆಲ್ಲ ನೆಲಕ್ಕೆ ಉರುಳಿದೆ, ರೈತರು ಇದಕ್ಕೆ ಸಂಬಂಧಪಟ್ಟ ಅಧಿ0ಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲಾವಂತೆ. ರೈತರು ಗೊಬ್ಬರ, ಎಣ್ಣೆ ,ಸಾಲ ಮಾಡಿ ತಂದಿದ್ದು ಅದನ್ನು ಕಟ್ಟಲು ಹಣ ಇಲ್ಲದೆ ಪರದಾಡುವಂತ ಸ್ಥಿತಿ ಬಂದಿದೆ. ಬೆಳೆಯನ್ನೇ ನಂಬಿಕೊಂಡು ಕುಂತಿದ್ದ ರೈತರು ಮಳೆಯಿಂದ ಬೆಳೆ ಕೂಡ ನಾಶವಾಗಿದೆ.. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಹೊಲದಲ್ಲಿ ನಾಶವಾದ ಭತ್ತ ಪರಿಶೀಲನೆ ಮಾಡಿ ಸರ್ಕಾರದಿಂದ ಬರುವ ಪರಿಹಾರ ಸಿಗದೇ ಹೋದರೆ ನಾವು ವಿಷಯ ಸೇವಿಸಿಕೊಳ್ಳುತ್ತೇವೆ ಎಂದು ರೈತರು ಆಗ್ರಹಿಸಿದ್ದಾರೆ,
ವರದಿ-ಸುರೇಶ್ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ