Uncategorized

ಭಾರಿ ಮಳೆಗೆ ಅಫಜಲಪುರ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕ ಬಂದ್..!

Published

on

ಅಫಜಲಪುರ: ಅಫಜಲಪೂರ ತಾಲೂಕಿನಲ್ಲಿ ಸತತವಾಗಿ ಬಿರುಗಾಳಿ ಸಹಿತ ಭಾರಿ ಮಳೆಯಿಂದ ತಾಲೂಕಿನ ಎಲ್ಲಾ ರಸ್ತೆಗಳು ಸೇರಿದಂತೆ ಚವಡಾಪೂರ, ಅಫಜಲಪುರ ರಾಜ್ಯ ಹೆದ್ದಾರಿ, ಬಾದನಳ್ಳಿ ಬ್ರಿಜ್, ಜಲಾವೃತಗೊಂಡು ಕಲಬುರ್ಗಿ ಅಫಜಲಪುರ ರಸ್ತೆಯ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಇಂಡಿ ತಾಲೂಕಿಗೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿರುವ ಕಾರಣ ರಸ್ತೆ ಸಂಚಾರ ಬಂದಾಗಿದ್ದು ಬಸ್ ಮತ್ತು ವಾಹನ ಸವಾರರು ,ಸಾರ್ವಜನಿಕರು ರಸ್ತೆಯಲ್ಲಿ ನಿಂತು ಪರದಾಡುವ ಪರಿಸ್ಥೀತಿ ಎದುರಾಗಿದೆ. ಇನ್ನೂ ಮಳೆಯಿಂದಾಗಿ ರೈತರು ಬೇಳೆದ ಕಬ್ಬು,ತೋಗರಿ, ಹತ್ತಿ ಇನ್ನಿತರ ಬೇಳೆಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತರು ಗೋಳಾಡುವಂತಾಗಿದ್ದು, ಕೂಡಲೇ ಅಧಿಕಾರಿಗಳು ರೈತರ ಬೇಳೆ ಸಮಿಕ್ಷೆ ಮಾಡಿ ರೈತರಿಗೆ ಪರಿಹಾರ ಕಲ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ವರದಿ- ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪೂರ

Click to comment

Trending

Exit mobile version