ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೌಡೂರು ಗ್ರಾಮದಲ್ಲಿ ಮಹಾ ಮಳೆಗೆ ಜನರು ತತ್ತರಿಸಿ ಹೊಗಿದ್ದಾರೆ. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಮನೆಗಳು ಜಲಾವೃತಾವಾಗಿದ್ದು, ಮನೆಯಲ್ಲಿರುವ ವಸ್ತುಗಳೆಲ್ಲಾ ನೀರು ಪಾಲಾಗಿವೆ. ಇನ್ನು ಮನೆಗೆ ನುಗ್ಗಿದ ನೀರನ್ನು ಒರಗಡೆ ಹಾಕುವುದೇ ಇಲ್ಲಿಯಾ ಜನರಿಗೆ ದೊಡ್ಡ ಕೆಲಸವಾಗಿದೆ. ಇಷ್ಟೇಲ್ಲಾ ಆದ್ರೂ ಗೌಡೂರು ಗ್ರಾಮದ ಪರಿಸ್ಥಿತಿ ಕೇಳಲು ಮಾತ್ರ ಯಾವೊಬ್ಬ ಅಧಿಕಾರಿಯಾಗಲೀ,ಜನಪ್ರತಿಧಿಗಳಾಗಲಿ ತಿರುಗಿ ನೋಡಿಲ್ಲಾ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.