Uncategorized

ಆಶಾ ಕಾರ್ಯಕರ್ತೆಯರಿಗೆ ಆತ್ಮೀಯತೆಯ ಸನ್ಮಾನ..!

Published

on

ಮೂಡಲಗಿ: ಕೊರೊನ ರೋಗದ ವಿರುದ್ಧ ಹೋರಾಡುತ್ತಿರುವ ಕೊರೊನ ವಾರಿಯರ್ಸ್ ಗಳಾದ ಆರೋಗ್ಯ ಇಲಾಖೆ ,ಪೋಲಿಸ್ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸನ್ಮಾನವನ್ನು ಮಾಡಲಾಯಿತು. ಇಂದು ಮಂಜುನಾಥ ಡಂಗ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು ಹಾಗೂ ವೈದ್ಯರಿಗೆ ಮತ್ತು ಊರಿನ ಗಣ್ಯರಿಗೆ ಸತ್ಕಾರ ಕಾರ್ಯಕ್ರಮವನ್ನು ಆಯೊಜಿಸಿಲಾಗಿತ್ತು. ಕಾರ್ಯಕ್ರಮದ ಆರೋಗ್ಯ ವೈದ್ಯಾಧಿಕಾರಿ ಡಾ/ಸಿ.ಆರ್.ಕುಂಬಾರ ಮಾತನಾಡಿ ಆರೋಗ್ಯ ಇಲಾಖೆಯ ಹಾಗೂ ಪೋಲಿಸ್ ಇಲಾಖೆಯ ಮತ್ತು ಆಶಾಕಾರ್ಯಕರ್ತರ ಸನ್ಮಾನ ಸಮಾರಂಭ ಇಟ್ಟು ಕೊಂಡಿದ್ದು ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೆವೆ. ಕೊರೊನ ಬರದಹಾಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಚಂದ್ರಕಾಂತ ಮೊಟೇಪಗೋಳ ಹೇಳಿದರು.ಇದೆ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಯವರಿಗೆ ಸನ್ಮಾನ ವೈದ್ಯರಿಗೆ ಮತ್ತು ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಗೆ ಸಮಾರಂಭ ನೇರೆವೆರಿಸಿದರು.ಮುಖ್ಯ ಅತಿಥಿಗಳು ಶ್ರೀನಾಗಪ್ಪಣ್ಣಾ ಶೇಖರಗೋಳ ಶ್ರೀ ಮಹಾಂತೇಶ್ ಅಜ್ಜನವರು ಶ್ರೀಚಂದ್ರಕಾಂತಮೋಟೆಪ್ಪಗೋಳ ಹಾಗೂ ನೀಲಕಂಠ ಕಪ್ಪಲಗುದ್ದಿ ಮತ್ತುಗೋಪಾಲ ಕುದರಿ ಅಮಿನ ಲಾಡಖಾನ ಮಹಾದೇವಶಕ್ಕಿ ಪ್ರಮೋದ ನುಗ್ಗಾನಟ್ಟಿ ಹಾಗೂ ಆಶಾ ಕಾರ್ಯಕರ್ತರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದನಾ ಸಮಾರಂಭ ಮಂಜುನಾಥ ಡಂಗ ಅವರು ಬಂದು ನಮ್ಮ ಆರೋಗ್ಯ ಇಲಾಖೆಯ ಹಾಗೂ ಪೋಲಿಸ್ ಇಲಾಖೆಯ ಮತ್ತು ಆಶಾಕಾರ್ಯಕರ ಸನ್ಮಾನ ಸಮಾರಂಭದ ಕುರಿತು ತುಂಬಾ ಸಂತೋಷವಾಗಿದೆ ಈ ಸಂದರ್ಬದಲ್ಲಿ ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೆವೆ ಎಂದರು.

ವರದಿ-ಶಂಕರ ಭಜಂತ್ರಿ ಎಕ್ಸ್ಪ್ರೆಸ್ ಟಿವಿ ಮೂಡಲಗಿ

Click to comment

Trending

Exit mobile version