ವಿಜಯಪುರ

ಭಾರಿ ಮಳೆಗೆ ಜಲಾವೃತಗೊಂಡ ಭೀಮಾತೀರ..!

Published

on

ವಿಜಯಪುರ: ಮುರ್ನಾಲ್ಕು ದಿನದಿಂದ ಬೆನ್ನು ಬಿಡದೆ ಮಳೆ ಸುರಿಯುತ್ತಿರವ ಹಿನ್ನೆಲೆ ಭಿಮಾ ನದಿ ನೀರಿನ ಮಟ್ಟ ದಿನೇ ದಿನೇ ಹೆಚ್ಚಳವಾಗುತ್ತಲಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಸೋನ್ನ ಬ್ಯಾರೆಜನಿಂದ ಲಕ್ಷಗಟ್ಟಲೇ ಕ್ಯೂಸೆಕ್ ನೀರು ಬಿಡಲಾಗ್ತಿದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮ ಅರ್ಧಭಾಗ ಜಲಾವೃತಗೊಂಡಿದೆ ಗ್ರಾಮದ ಸುತ್ತಮುತ್ತಲು ನೀರು ಆವರಿಸಿಕೊಂಡಿದೆ ಹನುಮಾನ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಗ್ರಾಮದ ಹಲವಾರು ಮನೆಗಳಲ್ಲಿ ನೀರು ತುಂಬಿವೆ ಇಂತಹ ಪ್ರವಾಹದ ಸಂದರ್ಭದಲ್ಲಿ ಆಂಜನೇಯ ದೇವಸ್ಥಾನದ ಪೂಜಾರಿ ಪೂಜೆ ಮಾಡಲು ದೇವಸ್ಥಾನಕ್ಕೆ ಈಜುಕೊಂಡು ಹೋಗಿ ಪೂಜೆ ಮಾಡಿಕೊಂಡು ಬಂದಿದ್ದು ವಿಶೇಷ ಇನ್ನು ನದಿ ಪಾತ್ರದ ಗ್ರಾಮಗಳಾದ ತಾರಾಪುರ ಕುಮಸಗಿ, ಕಡ್ಲೇವಾಡ, ಶೇಂಬೆವಾಡ ಗ್ರಾಮಗಳಿಗೆ ನೀರು ನೂಗಿದ್ದು ಪ್ರವಾಹದ ಬಿತಿ ಎದಿರುಸುತ್ತಿವೆ. ನದಿ ಸುತ್ತಮುತ್ತಲಿನ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆ ಸ್ಥಳಾಂತರ ಗೊಳ್ಳುತ್ತಿದ್ದಾರೆ.ವರುಣನ ಅಬ್ಬರದಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ ನಾಡಿನಾಧ್ಯಂತ ನದಿ ಪಾತ್ರದ ಗ್ರಾಮಗಳೆಲ್ಲವೂ ಜಲಾವೃತ ಗೊಂಡರು ಸಹ ಇನ್ನುಕೂಡಾ ವರುಣನ ಅಬ್ಬರ ಕಡಿಮೆಯಾಗುತ್ತಿಲ್ಲ.

ವರದಿ- ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Click to comment

Trending

Exit mobile version