ರಾಯಚೂರು, ಜೇವರ್ಗಿ, ಯಾದಗಿರಿ, ಹುಕ್ಕೇರಿ, ಮಸ್ಕಿ ಮತ್ತು ಬಿಜಾಪುರ ತಾಲ್ಲೂಕಿನ ಆಯ್ದ ಪ್ರದೇಶಗಳಿಗೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದಿಂದ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ತಂಡದೊಂದಿಗೆ ದೂರದ ಬಿಜಾಪುರ, ಚಡಚಣ ಹಾಗೂ ಬೆಳಗಾವಿ ವಿಭಾಗದ ಗಡಿ ಪ್ರದೇಶಕ್ಕೆ ಪ್ರವಾಹ ಪರಿಹಾರ ಕಾರ್ಯವನ್ನು ನಡೆಸಲು 1500 ಕುಟುಂಬಗಳಿಗೆ ಬೇಕಾಗುವಂತಹ ದಿನಸಿ ಸಾಮಾನುಗಳು, ಚಾಪೆ, ಹೊದಿಕೆ, ಸೀರೆ, ಪಂಚೆ, ಒಳ ಉಡುಪುಗಳು ಸೇರಿದಂತೆ ಎಲ್ಲ ಸಾಮಾನು ಸರಂಜಾಮುಗಳನ್ನು ಸುಮಾರು 20 ಟನ್ ಆಗುವಷ್ಟು ಪರಿಹಾರ ಸಾಮಗ್ರಿಗಳನ್ನು ಟ್ರಕ್ನಲ್ಲಿ ಸಾಗಿಸಲಾಯಿತು. ಬಿಜಾಪುರಕ್ಕೆ ಹೊರಡುವ ಕಾರ್ಯ ಹಮ್ಮಿಕೊಂಡಿದ್ದರು ಇದು ಪರಿಹಾರ ಕಾರ್ಯದ ಮೂರನೇ ಹಂತದ ಕಾರ್ಯಕ್ರಮವಾಗಿದೆ ಎಂದು ಸ್ವಾಮಿಜಿ ತಿಳಿಸಿದರು.
ವರದಿ: ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ