ಅರಕಲಗೂಡು : ತಾಲ್ಲೂಕು ಆಡಳಿತ ವತಿಯಿಂದ ಆಹಾರ ಧಾನ್ಯಳ ಕಿಟ್ ವಿತರಣೆಗೆ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕ ಇಲಾಖೆ .ಹಾಗೂ ಕಾರ್ಮಿಕ ಸಂಘಟನೆಗಳಿಗೆ ವಿಷಯ ತಿಳಿಸಿ ನೊಂದಣೀಯಾದ ಕಾರ್ಮಿಕರಿಗೆ ಮೊದಲೇ ಹೆಸರು ನೊಂದಯಿಸಿ ರಶೀದಿ ಮತ್ತು ಆಹಾರ ಕಿಟ್ ಪಡೆಯಲು ನೀಡಲಾಗಿತ್ತು. ಹಾಗೂ ಶಾಸಕರು ವೇದಿಕೆ ಕಾರ್ಯಕ್ರಮ ಮುಗಿಸಿ ಆಹಾರ ಧಾನ್ಯಗಳ ಕಿಟ್ ಗಳನ್ನು ಸಾರಥಿ ಸಾಲಿನಲ್ಲಿ ನಿಂತು ನಿಧಾನವಾಗಿ ಪಡೆಯಬಹುದು ಎಂದು ತಿಳಿಸಿದ ತಕ್ಷಣ ಸಭೆಯಲ್ಲಿ ಕುಳಿತಿದ್ದ ಕಾರ್ಮಿಕರು ಆಹಾರ ಧಾನ್ಯ ಕಿಟ್ ಪಡೆಯಲು ಮುಗಿದಿದ್ದು ಸಾಮಾಜಿಕ ಅಂತರ ಪಾಲಿಸದೆ ನಿರ್ಲಕ್ಷ್ಯ ಜೊತೆಗೆ ಅಧಿಕಾರಿಗಳ ಮುಂಜಾಗ್ರತಾ ಕ್ರಮಗಳ ಲೆಕ್ಕಾಚಾರ ಉಲ್ಟಾ ಪಲ್ಟಾ ಮಾಡಿದರು. ತಾಲ್ಲೂಕಿನಲ್ಲಿ ದಿನೇ ದಿನೇ ಕೋರೋನಾ ರೋಗದ ಹರಡುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ ಎಂದ ಸಾರ್ವಜನಿಕವಾಗಿ ತಿಳಿದ ವಿಷಯವೇ ಅದರು ನಾಗರೀಕರಿಗೆ ರೋಗದ ತೀಕ್ಷ್ಣ ಅರಿವು ಅದಾಂದಂತೆ ಕಾಣುತ್ತಿಲ್ಲ ಎನ್ನುವುದು ವಿಷಾದನೀಯವಾಗಿದೆ.
ವರದಿ: ಎ.ಎಸ್ ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು..