ನಾಗಮಂಗಲ: ಗುರುವಾರ ರಾತ್ರಿ 10.45 ರಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಿಡ್ನಾಪ್ ಆಗಿದ್ದ ನಾಗಮಂಗಲ ಪುರಸಭೆ ಸದಸ್ಯ ಮಂಜುನಾಥ್ ಕಿಡ್ನಾಪ್ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಪಹರಣ ಜಾಲದ ಬೆನ್ನತ್ತಿದ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾರ್ಗದರ್ಶನದಂತೆ ಡಿವೈಎಸ್ಪಿ ನವೀನ್ ಕುಮಾರ್ ಮತ್ತು ಸಿಪಿಐ ರಾಜೇಂದ್ರ ನೇತೃತ್ವದಲ್ಲಿ ಪರಿಶೋಧನೆ ನಡೆಸಿದ ಪಿಎಸ್ ಐ ರವಿಕಿರಣ್ಮೊ ಬೈಲ್ ನಂಬರ್ ಟ್ರೇಸ್ ಮಾಡುವ ಮೂಲಕ ದುಷ್ಕರ್ಮಿಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಇಂದು ಮಧ್ಯಾಹ್ನ 3.30. ರ ವೇಳೆಗೆ ಮಂಜುನಾಥ್ ನನ್ನು ಇಲಾಖೆಯ ವಾಹನದಲ್ಲಿ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಕಿಡ್ನಾಪ್ ಪ್ರಕರಣದ ಬಗ್ಗೆ ಪೋಲಿಸರು ಮಂಜುನಾಥ್ ನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವರದಿ- ಎಕ್ಸ್ ಪ್ರೆಸ್ ಟಿವಿ ನಂಜನಗೂಡು