ತಿಪಟೂರು: ತಾಲ್ಲೂಕಿನ ಪ್ರಸಿದ್ಧ ಮಠಗಳಲ್ಲಿ ಒಂದಾದ ಶ್ರೀ ಕಾಡಸಿದ್ದೇಶ್ವರ ಮಠ ನೊಣವಿನಕೆರೆ ಶ್ರೀಮಠದಲ್ಲಿ ಸರಳವಾಗಿ ನಡೆದ ನವರಾತ್ರಿ ದಸರಾ ಮಹೋತ್ಸವದಲ್ಲಿ ಶ್ರೀ ಡಾಕ್ಟರ್ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿಗಳು ಶಮಿಪೂಜೆ ಮಾಡಿ ಬನ್ನಿಮಂಟಪಕ್ಕೆ ಪೂಜೆ ನೆರವೇರಿಸಿ, ಪ್ರಪಂಚಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನ ರೋಗ ಅತಿಶೀಘ್ರವಾಗಿ ಕೊನೆಗೊಳ್ಳಲಿದೆ ಬರುವ ಸಂವತ್ಸರಕ್ಕೆ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದರು. ಇದೆ ಶ್ರೀಗಳು ಹಿಂದೆ ಶತಮಾನಕ್ಕೊಮ್ಮೆ ಬರುವ ಮಹಾಮಾರಿ ಶತಮಾನಕ್ಕೆ ಬಂದಿದೆ ಎಂದು ನುಡಿದಿದ್ದರು.
ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು