ಅಫಜಲಪುರ: ಕಲಬುರ್ಗಿ ಜಿಲ್ಲೆ ಅಫಜಲಪುರ ಪಟ್ಟದಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ತಾಲೂಕ್ ಘಟಕದ ಅಫಜಲಪುರ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನಾಧರಿತ ಧಾರವಾಹಿ ‘ಮಹಾನಾಯಕ’ ಜೀ ಟಿವಿ ಕನ್ನಡ ವಾಹಿನಿ ಹಾಗೂ ಕಲಾವಿದರಿಗೆ ಅಭಿನಂದನಾ ಅರ್ಪಣಾ ಕಾರ್ಯಕ್ರಮದ ಪ್ಲೆಕ್ಸ್ ಉದ್ಘಾಟನೆಯನ್ನು ಸಮಾಜ ಸೇವಕ ಜೆ.ಎಂ.ಕೊರಬು ನೆರವೇರಿಸಿದರು. ಶರಣ ಮಾರ್ಗ ಮಾಸ ಪತ್ರಿಕೆ ಸಂಪಾದಕ ಶಿವರಂಜನ್ ಸತ್ಯಂಪೇಟ್ ಅವರು ಬುದ್ದ, ಬಸವ,ಅಂಬೇಡ್ಕರ್ ಅವರ ಕುರಿತು ಉಪನ್ಯಾಸವನ್ನು ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಬಸಣ್ಣ ಗುಣಾರಿ,ಬಸವರಾಜ ಚಾಂದಕವಟೆ, ಶಿವುಕುಮಾರ ನಾಟೀಕಾರ,ಶರಣಗೌಡ ಪಾಟೀಲ್, ಮಲ್ಲಿಕಾರ್ಜುನ ಸಿಂಗೆ, ಮಹಾಂತೇಶ ಬಡದಾಳ, ಭಗವಂತ ವಗ್ಗೆ, ಮಹೇಶ್ ಆಲೇಗಾಂವ, ಗೌತಮ್ ಸಕ್ಕರಗಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ: ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ