ಬಾಗಲಕೋಟೆ:ಬಾಗಲಕೋಟೆ ತಾಲ್ಲೂಕಿನ ಕಿರಸೂರ, ಬೆನಕಟ್ಟಿ, ಮನ್ನಿಕಟ್ಟಿ, ಶಿರೂರ, ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳ ಭೂಮಿ ಪೂಜೆಯನ್ನು ಬಾಗಲಕೋಟೆಯ ಶಾಸಕರಾದ ಡಾ ವೀರಣ್ಣಾ ಚರಂತಿ ಮಠರು ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರರವರು ನೆರವೇರಿಸಿದರು. ನಂತರ ಶಿರೂರ ಗ್ರಾಮದಲ್ಲಿ ಕೆರೆ ತುಂಬುವ ಯೋಜನೆ ಮುಖಾಂತರ ಹಾಗೂ ಮಳೆಯಿಂದಾಗಿ ತುಂಬಿರುವ ಕೆರೆಗಳೀಗೆ ಬಾಗಿನ ಅರ್ಪಿಸಿದರು.ಇನ್ನೂ ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಪಕ್ಷದ ಮುಖಂಡರು, ಗ್ರಾಮದ ಹಿರಿಯರು, ಉಪಸ್ಥಿತರಿದ್ದರು.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ