ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿ, ಜವರನಹಳ್ಳಿ ಗ್ರಾಮದಲ್ಲಿ ರೈತಾಪಿ ವರ್ಗ ಸೇರಿದಂತೆ ನಾಗರೀಕರ ಸೇವೆಯ ಉದ್ದೇಶದಿಂದ ಜೆಡಿಎಸ್ ಮುಖಂಡ, ಸಮಾಜ ಸೇವಕ ಗೌರೀಶ್ ಉಚಿತ ಕಂಪ್ಯೂಟರ್ ಗಳನ್ನು ತಹಸೀಲ್ದಾರ್ ಕುಂಞ ಅಹಮ್ಮದ್ ಮೂಲಕ ತಾಲೂಕು ಕಚೇರಿಗೆ ನೀಡಿದರು. ತಾಲೂಕು ಕಚೇರಿಗೆ ಉಚಿತವಾಗಿ ನೀಡಿರುವ ಕಂಪ್ಯೂಟರ್ ಉಪಕರಣಗಳು ಸಾರ್ವಜನಿಕರ ಮತ್ತು ರೈತಾಪಿ ವರ್ಗದವರ ಜನರಿಗೆ ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ ಸಮಾಜ ಸೇವಕ ಗೌರೀಶ್ ರವರು ತಾಲೂಕಿನ ವ್ಯಾಪ್ತಿಯಲ್ಲಿ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಬಡ ಜನತೆಗೆ ಧ್ವನಿಯಾಗಿ ನಿಂತಿರುವುದು ಇವರ ಸಮಾಜ ಸೇವೆಯನ್ನು ಗುರುತಿಸುತ್ತದೆ ಎಂದು ತಹಸೀಲ್ದಾರ್ ಕುಂಞ ಅಹಮ್ಮದ್ ತಿಳಿಸಿದರು