ಸಾಮಾನ್ಯವಾಗಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಸಾಮೂಹಿಕವಾಗಿ ಗೋವುಗಳಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಅಲ್ಲದೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದವನ್ನು ನೇರವೇರಿಸಲಾಯಿತು. ಈ ಮಠದಲ್ಲಿ ಭಕ್ತರಿಂದ ಪ್ರತಿನಿತ್ಯ ಗೋವುಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತದೆ.ಇನ್ನೂ ಮಹಾಲಿಂಗಶ್ವರ ಮಠದ ಶ್ರೀಗಳು ಗೋವುಗಳ ಗರ್ಭಾವಸ್ಥೆಯ ಕಂಡು ಭಗವಂತನ ಸಮಾನವಾದ ಗೋವುಗಳಿಗೆ ಸೀಮಂತ ಕಾರ್ಯ ಮಾಡುವದರ ಮೂಲಕ ದೈವಿ ಕೃಪೆಗೆ ಪಾತ್ರರಾಗಿದ್ದಾರೆ.
ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ