ಮಗಳು ಭಾರವಲ್ಲ, ಅವಳು ಆಧಾರಳು, ಜೀವನ ಅವಳ ಹಕ್ಕು ಶಿಕ್ಷಣವು ಅವಳ ಆಯುಧ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್ ಸಿ ಮ್ಯಾಕೇರಿ ಹೇಳಿದರು. ವಿಜಯಪುರ ಇಂಡಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಯೋಗದಲ್ಲಿ ಭೇಟಿ ಬಚವೋ, ಭೇಟಿ ಪಡಾವೋ ಜಾಗೃತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿ ಮಾತಾನಾಡಿದರು. ಲಿಂಗ ಪಕ್ಷಪಾತ್ ಮತ್ತು ಲಿಂಗ್ ಆಯ್ಕೆ ಮಾಡುವುದನ್ನು ತಡೆಗಟ್ಟುವುದು.ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು. ಇದು ವರದಕ್ಷಣೆ ಮತ್ತು ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶ ಹೊಂದಿದೆ. ತಾಲೂಕಿನ ಅಗರಖೇಡ, ತಾಂಬಾ, ಸಾಲೋಟಗಿ,ನಾದ ಝಳಕಿ ಗ್ರಾಮದಲ್ಲಿ ಐದು ದಿನದ ಜಾಗೃತಾ ಕಾರ್ಯಕ್ರಮವಿದೆ ಎಂದು ಹೇಳಿದರು.