Uncategorized

ಕ್ಷುಲ್ಲಕ ಕಾರಣಕ್ಕೆ ಭಾವನಿಂದಲೇ ನಾದಿನಿ ಮೇಲೆ ಹಲ್ಲೆ..!

Published

on

ಶ್ರೀನಿವಾಸಪುರ: ಕ್ಷುಲ್ಲಕ ಕಾರಣಕ್ಕೆ ಸ್ವಂತ ಭಾವನಿಂದಲೇ ಸ್ವಂತ ತಮ್ಮನಾ ಹೆಂಡತಿ (ನಾದಿನಿ )ಗೆ ಹಿಗ್ಗಾ ಮುಗ್ಗ ತಲಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಕುಂಟೆ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದು ವಿದ್ಯುತ್ ತಂತಿಗಳ ಮೇಲೆ ಹುಣಸೆಮರ ರಂಬೆಗಳು ಬೀಳುತ್ತಿವೆ ಎಂಬ ಕಾರಣಕ್ಕೆ ಅದನ್ನು ಕಟಾವು ಮಾಡಲು ಕೆಇಬಿ ಅಧಿಕಾರಿಗಳಿಗೆ ರತ್ನಮ್ಮ ತಿಳಿಸಿದ್ದರು. ಅಧಿಕಾರಿಗಳು ಕಟಾವು ಮಾಡಲು ಬಂದಾಗ ಹುಣಸೆ ಮರ ಬೆಳೆಸಿರುವಂತಹ ರತ್ನಮ್ಮನವರ ಭಾವನಾದ ಶಂಕರಪ್ಪ ಹಾಗೂ ಅವರ ಕುಟುಂಬ ಸದಸ್ಯರು ರತ್ನಮ್ಮ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗ್ರಾಮದ ಹಿರಿಯ ಮುಖಂಡರು ರಾಜಿ ಸಂಧಾನಕ್ಕೆ ಮುಂದಾಗಿದ್ದು ರಾಜಿ ಸಂಧಾನ ವಿಫಲವಾಗಿದ್ದು ನಿನ್ನೇ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಶಂಕ್ರಪ್ಪ, ಶಂಕರ್ ಬಾಬು,ಇಂದಿರಮ್ಮ ಈ ಮೂರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ರತ್ನಮ್ಮರನ್ನು ಹೊಡೆದಿರುವಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ-ರಾಮ್ ಚರಣ್ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Click to comment

Trending

Exit mobile version