ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟಿಗೆ ಅಫಜಲಪುರ ಸೊನ್ ಬ್ಯಾರೆಜನಿಂದ ನೀರು ತುಂಬಿಸುವ ಹಡಲಗಿ ಹತ್ತಿರ ನಡೆಯುತ್ತಿರುವ ಪೈಪಲೈನ ಕಾಮಗಾರಿಯನ್ನು ಮಾಜಿ ಶಾಸಕ ಬಿ.ಆರ್ ಪಾಟೀಲ ಪರೀಶಿಲನೆ ಮಾಡಿದರು. ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಇದ್ದು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಇದು ಮಂಜೂರಾತಿ ಪಡೆಯಲಾಗಿದೆ ಒಟ್ಟು ೪೨ ಕಿ.ಮೀ ಪೈಪಲೈನ ಕಾಮಗಾರಿ ಇದಾಗಿದೆ. ಒಟ್ಟು ೩೯೮ ಕೋಟಿ ವೆಚ್ಚದಲ್ಲಿ ಸೊನ್ಯ ಬ್ಯಾರೆಜ್ ನಿಂದ ನೀರನ್ನು ತಂದು ಅಮಾರ್ಜ ಆಣೆಕಟ್ಟಿಗೆ ತುಂಬಿಸಲಾಗುತ್ತಿದೆ. ಇದರಿಂದ ತಾಲೂಕಿನ ಜನರಿಗೆ ಅನಕೂಲವಾಗಲಿದೆ. ಮತ್ತು ದಾರಿಯಲ್ಲಿ ಬರುವ ಮ್ಯಾಡ್ಯಾಳದ ಎರಡು ಯಳಸಂಗಿ ಒಂದು ಕರೆಗಳನ್ನು ತುಂಬಿಸಲಾಗುತ್ತಿದೆ. ಆದರೆ ಇನ್ನು ಅನೇಕ ಕರೆಗಳು ಇದ್ದು ಅವುಗಳನ್ನು ತುಂಬಿಸಬೇಕಾದೆ. ಮಾದನಹಿಪ್ಪರಾ ಕೆರೂರ ಝಳಕಿ ಬಿ ಝಳಕಿ ಕೆ ಹಡಲಗಿ ನಿಂಬಾಳ ಸರಂಸಬಾ ನಾಗಲೆಗಾಂವ ಕೆರೆಗಳನ್ನು ತುಂಬಿಸಿದರೆ ಈ ಭಾಗದಲ್ಲಿ ಶಾಶ್ವತ ಕುಡಿಯುವ ನೀರು ಒದಗಲಿದೆ ಇದಕ್ಕಾಗಿ ಇನ್ನೂ ೪೮ಕೋಟಿ ವ್ಯಯಿಸಬೇಕಿದೆ. ಕಾಮಗಾಗಿ ವಿಳಂಬವಾಗಿ ನಡೆಯುತ್ತಿದ್ದು ತ್ವರಿತಗತಿಯಲ್ಲಿ ಮುಗಿಸಬೇಕು ಸ್ಥಳದಲ್ಲೆ ಇದ್ದ ಎಂದು ಇಲಾಖಾ ಅಧಿಕಾರಿಗಳಿ ತಿಳಿಸಿದರು. ಇದು ಕಾಮಗಾರಿ ಗುತ್ತಿಗೆದಾರ ಮೇಲೆ ಇದ್ದು ಅನುದಾನ ಬಿಡಗಡೆ ಆಗದೆ ಇರುವುದರಿಂದ ಕೆಲಸ ವಿಳಂವಾಗುತ್ತಿದೆ ಹಾಗೂ ಕೊರಾನಾ ಬಂದಿರುವುದುರಿAದ ಕೆಲಸ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದಾಗ ಸ್ಥಳದಕ್ಕೆ ಮಾನ್ಯ ನೀರಾವರಿ ಸಚಿವರಾದ ರಮೇಶ ಜಾಕಿರಹೊಳಿ ಅವರಿಗೆ ಪೋನ್ ಮೂಲಕ ಮಾತನಾಡಿ ಕಾಮಗಾರಿ ಸಂಭAದಿಸಿದAತೆ ಶಿಘ್ರ ಅನುದಾನ ಬಿgಡುಗಡೆ ಮಾಡಬೇಕು ಎಂದು ಸಚಿವರನ್ನು ಒತ್ತಾಯಿಸದರು.ನಂತರ ಹಡಲಗಿಲಗ ತುಂಬಿದ ಕರೆಗೆ ಬಾಗಿನ ಅರ್ಪಿಸಿದರು. ಇದೆ ಸಂದರ್ಬದಲ್ಲಿ ಮುಖಂಡರಾದ ವಿಶ್ವನಾಥ ಸರಂಸಬಿ ಮಲ್ಲಯ್ಯಾ ಸ್ವಾಮಿ ಮದಗುಣಕಿ ಶಿವುಕುಮಾರ ಎಲ್ದೆ ಶಂಕರ ಬಿರಾದಾರ ರಾವಸಾಭ ಪಾಟೀಳ ಹಿರಿಗೆಪ್ಪ ದೊಡ್ಡಮನಿ ಈರಣ್ಣಾ ಖೇಡ ನಾಗೇಂದ್ರ ಕೊರೆ ಇಲಾಖೆ ಅಧಿಕಾರಿಗಳಾದ ಕಲಿಲ್ ಅಹಮ್ಮದ ಎಮ್.ಬಿ ನಾಯಿಕೊಡಿ ಇತರು ಇದ್ದರು.
ವರದಿ- ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ