ಸಿಂಧನೂರು: ಕೇಂದ್ರ .ರಾಜ್ಯ ಸರ್ಕಾರ ಹಾಗೂ ವೆಂಕಟರಾವ್ ನಾಡಗೌಡ ವಿರುದ್ಧ ಇದೇ ಗುರುವಾರ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ನಗರದ ತಮ್ಮ ನಿವಾಸದಲ್ಲಿ ಸುದ್ದಿ ಗೋಷ್ಠಿ ಕರೆಯಲಾಗಿತ್ತು. ಈ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದ್ದು. ಈ ಬಾರಿ ರೈತರು ಬಹಳ ಸಂಕಷ್ಟದಲ್ಲಿದ್ದಾರೆ.ಇದರ ಬಗ್ಗೆ ವೆಂಕಟರಾವ್ ನಾಡಗೌಡ ಸರ್ಕಾರಕ್ಕೆ ಯಾವುದೇ ಪ್ರಶ್ನೆ ಮಾಡುತ್ತಿಲ್ಲ.ಜೊತೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿಲ್ಲ. ನೀರಿನ ಹೆಸರಿನಲ್ಲಿ ಜೊತೆಗೆ ರೈತರ ಹೆಸರಿನಲ್ಲಿ ಹೇಳಿಕೊಂಡು ಶಾಸಕರಾಗಿ ಆಯ್ಕೆಯಾದರು. ಆದರೆ ಇವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ರಾಜ್ಯ ಹಾಗೂ ಕೆಂದ್ರ ಸರಕಾರದ ನಿಲುವು ಗಳನ್ನು ಸಮಜಾಯಿಷಿ ನೀಡುತ್ತಿದ್ದಾರೆ .ಭತ್ತ ಖರೀದಿ ಕೆಂದ್ರ ಪ್ರಾರಂಭ ಮಾಡಲು ಜೊತೆಗೆ ಭತ್ತಕ್ಕೆ ಬೆಂಬಲ ಬೆಲೆ ನೀಡಲು. ಒತ್ತಾಯಿಸುವ ಜೊತೆಗೆ ಶಾಸಕ ವೆಂಕಟರಾವ್ ನಾಡಗೌಡ ವಿರುದ್ಧ 19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಜೆಡಿಎಸ್ ಪಕ್ಷ ಹೊರತು ಪಡಿಸಿ ಎಲ್ಲಾ ಪಕ್ಷದ ಮುಖಂಡರು ವಿವಿಧ ಸಂಘಟನೆಗಳು ಭಾಗವಹಿಸಿ ರೈತರ ಪರ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದರು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಜಿಪಂ ಸದಸ್ಯ ಬಸವರಾಜ ಹಿರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಜಾಫರ್ ಸಾಬ್ ಜಾಗಿರ್ದಾರ್, ಎಚ್ ಎನ್ ಬಡಿಗೇರ್ ,ಆರ್. ಸಿ ಪಾಟೀಲ್ ,ಛತ್ರಪ್ಪ ಇತರರು ಇದ್ದರು.
ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು