ತಮಿಳುನಾಡುಃ ತಮಿಳುನಾಡಿನ ಧರ್ಮಪುರಿ ಜಿಲ್ಲಯ ಪಂಚಪಲ್ಲಿಯಲಲಿ ಬಾವಿಗೆ ಬಿದ್ದಿದ್ದ ಆನೆ ಮರಿಯೊಂದನ್ನು ರಕ್ಷಣೆ ಮಾಡಲಾಗಿದ. ನಿನ್ನೆ ಆಹಾರ ಅರಸುತ್ತಾ ನಾಡಿಗೆ ಬಂದಿದ್ದ ಆನೆ ಮರಿ ಗ್ರಾಮದಲ್ಲಿದ್ದ ಬಾವಿಗೆ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಸತತ 16 ಗಂಟೆಗಳ ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು