ಮಳವಳ್ಳಿ ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ, ಶಾಂತಿ ಸಮುದಾಯ ಭವನ, ಸುಜುಕಿ ಶೋರೂಮ್, ಸುಲ್ತಾನ್ ರಸ್ತೆಯ ಮಹೇಂದ್ರ ಟ್ರಾಕ್ಟರ್ ಶೋ ರೂಂ ಸೇರಿದಂತೆ ಹಲವೆಡೆ ಸರಣಿ ಕಳ್ಳತನ ನಡೆದಿದ್ದು, ನಗದು ಸೇರಿದಂತೆ ದಾಖಲಾತಿಗಳು ಕಳ್ಳರು ಕಳ್ಳತನ ಮಾಡಿದ್ದಾರೆ. ಮಳವಳ್ಳಿ ಪಟ್ಟಣದ ಶಾಂತಿಸಮುದಾಯ ಭವನ ಕಚೇರಿಯಲ್ಲಿದ್ದ 50 ಸಾವಿರ ರೂ ಶಾಂತಿ ಕಾಲೇಜಿನಲ್ಲಿರುವ ಶಾಂತಿ ಪಿ.ಯು ಹಾಗೂ ಪದವಿ ಕಾಲೇಜಿನಲ್ಲಿ ಬೀಗ ಮುರಿದು 50 ಸಾವಿರ ರೂ ನಗದು ಕಳವುಯಾಗಿದ್ದು,ಬೀರುನಲ್ಲಿದ್ದ ದಾಖಲಾತಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.ಇನ್ನೂ ಸುಜಕಿ ಶೋ ರೂಂ ಕಿಟಿಕಿಯ ಸರಳನ್ನು ಬ್ಲೇಡ್ ನಿಂದ ಕುಯ್ದು ಒಳಗೆ ನುಗ್ಗಿ ಶೋ ರೂಂನಲ್ಲಿದ್ದ 8 ಸಾವಿರ ರೂ ನಗದು ಕಳುವು ಮಾಡಿದ್ದಾರೆ. ಎನ್ನಲಾಗಿದೆ.ಈ ಸಂಬಂದ ಕಿಟಕಿಯ ಒಳಗೆ ನುಗ್ಗುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದರೂ ಆರೋಪಿಗಳ ಕಣ್ಣು ಮಾತ್ರ ಕಾಣುತ್ತಿದೆ ಎನ್ನಲಾಗಿದೆ. ಇನ್ನೂ ಸುಲ್ತಾನರಸ್ತೆಯಲ್ಲಿ ಟ್ರಾಕ್ಟರ್ ಶೋ ರೂ ನಲ್ಲೂ ಸಹ ಬೀಗ ಮುರಿದು ಬೀರುವನ್ನು ಜಾಲಯಾಡಿದ್ದು ಹಣವಿಲ್ಲದ ಕಾರಣ ಬಂದದಾರಿಗೆ ಸುಂಕವಿಲ್ಲದಂತೆ ಹೋಗಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಡಿವೈಎಸ್ಪಿ ಎಂ.ಜೆ.ಪೃಥ್ವಿ, ಗ್ರಾಮಾಂತರ ಪಿಎಸ್ಐ ಡಿ.ರವಿಕುಮಾರ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ