ಹುಬ್ಬಳ್ಳಿ: ಸೋಷಿಯಲ್ ಇಂಪ್ಯಾಕ್ಟ್ ,ಸ್ಮುರ್ತಿ ಸಾಧನ,ರೌಂಡ್ ಟೇಬಲ್, ಲೇಡೀಸ್ ಸರ್ಕಲ್ 45 ಸಂಯೋಗದಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮವನ್ನು ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು, ನಗರದ ಖಾಸಗಿ ಹೋಟೆಲ್ ನಡೆದ ಕಾರ್ಯಕ್ರಮವನ್ನು ಡಾ.ಉಮೇಶ್ ಹಳ್ಳಿಕೇರಿ,ರೇಷ್ಮಾ ಪರ್ನಾಂಡಿಸ್, ಹಿಮಾನಷ್ ಕೊಠಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಇನ್ನೂ ದೇಶದಲ್ಲಿ ಕೊರೊನಾ ಹಾವಳಿಯಲ್ಲಿ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡಿದ್ದ ವೈದ್ಯರಿಗೆ, ಪತ್ರಕರ್ತರು, ನರ್ಸ್ ಗಳು, ಹಾಗೂ ಪ್ಲಾಸ್ಮಾ ದಾನ ಮಾಡಿದವರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್ ಪ್ರೆಸಿಡೆಂಟ್ ಹಿಮಾನುಷ್ ಕೊಠಾರಿ, ಕಾರ್ಯಕ್ರಮ ಆಯೋಜಕಿ ರೇಷ್ಮಾ ಪರ್ನಾಂಡಿಸ್,ಡಾ ಪಾಟೀಲ್ ಇನ್ನಿತರ ಭಾಗಿಯಾಗಿದ್ದರು…
ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ