ಮಳವಳ್ಳಿ ತಾಲ್ಲೂಕಿನ ದೊಡ್ಡಗೌಡನ ಕೊಪ್ಪಲು ಕಲ್ಕುಣಿ, ಕಿರುಗಾವಲುಗಳಲ್ಲಿ ಕೆ ಆರ್ ಐಡಿಎಲ್ ವತಿಯಿಂದ ಅಲ್ಪ ಸಂಖ್ಯಾತರ ಕಾಲೋನಿಗಳಿಗೆ 91 ಲಕ್ಷ ರೂ ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳ ಗುದ್ದಲಿಪೂಜೆಯನ್ನು ಶಾಸಕ ಡಾ.ಕೆ ಅನ್ನದಾನಿ ನೇರವೇರಿಸಿದರು. ಬಳಿಕ ಶಾಸಕ ಡಾ.ಕೆ ಅನ್ನದಾನಿ ವಾಹಿನಿಯೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಅಲ್ಪಸಂಖ್ಯಾಂತರ ಅಭಿವೃದ್ದಿಗಾಗಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ 10 ಕೋಟಿ ರೂ ಬಿಡುಗಡೆ ಮಾಡಿಸಿದ್ದೆ . ಈಗ ಮಳವಳ್ಳಿ ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು , ಕಲ್ಕುಣಿ, ಕಿರುಗಾವಲು ಗ್ರಾಮದಲ್ಲಿರುವ ಅಲ್ಪ ಸಂಖ್ಯಾತರ ಕಾಲೋನಿಗೆ ಕಾಂಕ್ರೆಟ್ ರಸ್ತೆಹಾಗೂ ಚರಂಡಿಗೆ ಚಾಲನೆ ನೀಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ ವಿರೋಧಪಕ್ಷದ ನಾಯಕ ನಟೇಶ್ , ಸುಹಾಸ್ ಪ್ರಭು, ಆನಂದ್ ಕಲ್ಕುಣಿ, ರಾಜೇಂದ್ರ, ವೇಣು, ಸಣ್ಣಪ್ರಕಾಶ ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ