ಮಂಡ್ಯ

ಗೂಡ್ಸ್ ಗಾಢಿ ಅಡ್ಡಗಟ್ಟಿ ದರೋಡೆ- ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿ

Published

on

ಮಳವಳ್ಳಿ ತಾಲ್ಲೂಕಿನ ಶಿರಮಹಳ್ಳಿ ಗ್ರಾಮದ ಬಳಿ ಹೊಂಡಡಿಯೋ ಸ್ಕೂಟರ್ ನಲ್ಲಿ ಮೂವರು ಬಂದು ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ನಗದು ಕಸಿದುಕೊಂಡು ಹೋಗಿದ್ದ ದರೋಡೆ ಪ್ರಕರಣವನ್ನು ಬೇದಿಸುವಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ.ಮಳವಳ್ಳಿ ತಾಲ್ಲೂಕಿನ ಹುಸ್ಕೂರುಗ್ರಾಮ ಸೋಮಶೇಖರ್ ,ಹುಚ್ಚೇಗೌಡನದೊಡ್ಡಿ ಗ್ರಾಮದ ಶಿವಕುಮಾರ,ಅಪ್ಪಾಜಯ್ಯನದೊಡ್ಡಿ ಚಂದನ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಕ್ಯಾತೇಗೌಡದೊಡ್ಡಿ ಗ್ರಾಮದ ಬಳಿ ಇವರನ್ನು ತಪಾಸಣೆ ನಡೆಸುವ ಸಮಯದಲ್ಲಿ ಈ ಮೂವರು ತಪ್ಪಸಿಕೊಳ್ಳಲು ಯತ್ನಿಸಿದ್ದು ಇದರಿಂದ ಅನುಮಾನಗೊಂಡ ಪೋಲಿಸರು ತನಿಖೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ಸ್ಕೂಟರ್ ಹಾಗೂ ದುಡ್ಡನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version